ಕುಂದಾಪುರ: ಸಿಪಿಎಂ ಅಭ್ಯರ್ಥಿಗಳನ್ನು ಗೆಲ್ಲಿಸಿ; ನರಸಿಂಹ
ಕುಂದಾಪುರ, ಆ.29: ಸುಮಾರು 48 ಕೋಟಿ ರೂ.ಗಳಿಗೂ ಅಧಿಕ ವೆಚ್ಚದ ಕುಂದಾಪುರ ಒಳಚರಂಡಿ ಯೋಜನೆಯನ್ನು ಜನ ಸ್ನೇಹಿಯಾಗಿ ಜಾರಿಗೊಳಿಸಲು ಬಿಜೆಪಿ ನೇತೃತ್ವದ ಪುರಸಭೆ ಆಡಳಿತ ವಿಫಲವಾಗಿದ್ದು, ಜನರಿಗೆ ತೊಂದರೆ ಯಾಗದ ರೀತಿಯಲ್ಲಿ ಇದನ್ನು ಜಾರಿಗೊಳಿಸಲು ಸಿಪಿಐ(ಎಂ) ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಸಿಪಿಎಂ ಕುಂದಾಪುರ ವಲಯ ಸಮಿತಿ ಕುಂದಾಪುರ ಪುರಸಭ್ಯಾ ವ್ಯಾಪ್ತಿಯ ಮತದಾರರಲ್ಲಿ ಮನವಿ ಮಾಡಿದೆ.
ಒಳಚರಂಡಿ ಯೋಜನೆಯ ಕಾಮಗಾರಿ ಅತ್ಯಂತ ಕಳಪೆ ಗುಣಮಟ್ಟ ದ್ದಾಗಿದ್ದು ಇದನ್ನು ತಡೆಗಟ್ಟಲು ಪುರಸಭೆ ಆಡಳಿತ ವಿಫಲವಾಗಿದೆ. ಕೊಳಚೆ ಸಂಗ್ರಹ ಮತ್ತು ಶುದ್ಧೀಕರಣ ಘಟಕಗಳನ್ನು ಜನವಸತಿ ಪ್ರದೇಶಗಳಲ್ಲಿ ಅಳವಡಿಸಲು ಯೋಜನೆ ರೂಪಿಸಲಾಗಿದೆ. ಇದನ್ನು ವಿರೋಧಿಸಿ ಸಿಪಿಎಂ ಜನಪರ ಹೋರಾಟ ನಡೆಸುತ್ತಿದೆ ಎಂದು ಪಕ್ಷದ ಹೇಳಿಕೆ ತಿಳಿಸಿದೆ.
ಕುಂದಾಪುರದ ಹಲವಾರು ರಸ್ತೆಗಳು ಜಲ್ಲಿ ಕಲ್ಲು, ಹೊಂಡಗಳಿಂದ ಕೂಡಿದೆ. ಅಭಿವೃದ್ದಿ ಕಾಣದೆ ರಸ್ತೆಯಲ್ಲಿ ಸಾಗುವ ಜನರಿಗೆ, ವಾಹನ ಚಾಲಕರಿಗೆ ತೊಂದರೆಯಾಗುತ್ತಿದೆ. ಸರಕಾರದ ಅನುದಾನ ಹೆಚ್ಚಾಗಿದೆ. ಜನರ ಮೇಲೆ ತೆರಿಗೆಯ ಹೊರೆ ಹೆಚ್ಚಳವಾಗಿದೆ. ಆದರೂ ರಸ್ತೆಗಳು ಅಭಿವೃದ್ದಿ ಆಗಿಲ್ಲ. ಸಾಕಷ್ಟು ಹೊಸ ರಸ್ತೆಗಳ ನಿರ್ಮಾಣ ಆಗಿಲ್ಲ. ರಾಷ್ಟ್ರೀಯ ಹೆದ್ದಾರಿಯ ಗೋಳು ಹೇಳ ತೀರದು ಎಂದು ಹೇಳಿಕೆ ವಿವರಿಸಿದೆ.
ಇಂತಹ ಸನ್ನಿವೇಶದಲ್ಲಿ ಕುಂದಾಪುರ ಪುರಸಭೆಯ ಒಳಗೆ ಮತ್ತು ಹೊರಗೆ ಜನರ ದ್ವನಿಯನ್ನು ವಿಸ್ತರಿಸಲು ಆ.31ರಂದು ಕುಂದಾಪುರ ಪುರಸಭೆಗೆ ನಡೆಯುವ ಚುನಾವಣೆಯಲ್ಲಿ ಸಿಪಿಎಂ ಅಭ್ಯರ್ಥಿಗಳು 7 ಸ್ಥಾನಗಳಿಗೆ ಸ್ಪರ್ಧಿಸುತಿದ್ದಾರೆ. ಜನಪರ ಹೋರಾಟಕ್ಕಾಗಿ ಸಿಪಿಎಂ ಅ್ಯರ್ಥಿಗಳನ್ನು ಗೆಲ್ಲಿಸು ವಂತೆ ಪಕ್ಷದ ಕುಂದಾಪುರ ವಲಯ ಸವಿುತಿ ಮತದಾರರಲ್ಲಿ ಮನವಿ ಮಾಡಿದೆ.