ಸೆ. 3ರಿಂದ ರಂಜನಿ ಸ್ಮಾರಕ ಸಂಗೀತ ಕಾರ್ಯಕ್ರಮ
ಉಡುಪಿ, ಆ. 29: ರಂಜನಿ ಮೆಮೋರಿಯಲ್ ಟ್ರಸ್ಟ್ ಆಶ್ರಯದಲ್ಲಿ ರಂಜನಿ ಅವರ 36ನೇ ಜಯಂತಿ ಪ್ರಯುಕ್ತ ವಿವಿಧ ಸಂಗೀತ ಕಾರ್ಯಕ್ರಮಗಳು ಈ ಬಾರಿ ಸೆ.3ರಿಂದ 9ರವರೆಗೆ ನಡೆಯಲಿವೆ ಎಂದು ಟ್ರಸ್ಟ್ನ ಸ್ಥಾಪಕ ಹಾಗೂ ಕಾರ್ಯಕ್ರಮಗಳ ಆಯೋಜಕ ಪ್ರೊ.ವಿ.ಅರವಿಂದ ಹೆಬ್ಬಾರ್ ತಿಳಿಸಿದ್ದಾರೆ.
ಇಂದ್ರಾಳಿಯಲ್ಲಿರುವ ಲತಾಂಗಿ ಸಭಾಂಗಣದಲ್ಲಿ ಸೆ. 3ರಂದು ವಸಂತಲಕ್ಷ್ಮೀ ಹೆಬ್ಬಾರ್ ಅವರ ಗಾಯನ, ಶಿವಮೊಗ್ಗದ ವಿದ್ವಾನ್ ಎಲ್.ವಾಸುದೇವ ಭಟ್ ಅವರಿಂದ ‘ಧರ್ಮದ ಹತ್ತು ಲಕ್ಷಣಗಳು’ ಕುರಿತು ಪ್ರವಚನ ನಡೆಯಲಿದೆ. ಸೆ. 4ರಂದು ಸ್ವಾಮಿ ಶ್ರೀಸೂರ್ಯಪಾದರ (ಛಾಯಾಪತಿ ಗುರೂಜಿ) ಮಾರ್ಗದರ್ಶನದಲ್ಲಿ ಸತ್ಸಂಗ, ಭಜನೆ ನಡೆಯಲಿದ್ದರೆ, 5ರಂದು ಬೆಂಗಳೂರಿನ ವೈ.ಜಿ.ಶ್ರೀಲತಾರಿಂದ ವೀಣಾ ವಾದನ, 6ರಂದು ದೇವಿ ಅವರಿಂದ ಹಿಂದೂಸ್ಥಾನಿ ಗಾಯನ ನಡೆಯಲಿದೆ.
ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಸೆ. 7ರಂದು ಚೆನ್ನೈನ ರಂಜನಿ ಮತ್ತು ಗಾಯತ್ರಿ ಇವರಿಂದ ಗಾಯನ, 8ರಂದು ಲತಾಂಗಿ ಸ್ಕೂಲ್ ಆಫ್ ಮ್ಯೂಸಿಕ್ ವಿದ್ಯಾರ್ಥಿಗಳಿಂದ ಸಮೂಹಗಾಯನ, ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀವೀರೇಶಾನಂದ ಸರಸ್ವತಿ ಸ್ವಾಮೀಜಿ ಗಳಿಂದ ಪ್ರವಚನ ಹಾಗೂ ಅರ್ಚನಾ ಮತ್ತು ಸಮನ್ವೀ ಇರಿಂದ ದ್ವಂದ್ವ ಗಾಯನ ನಡೆಯಲಿದೆ.
ಸೆ. 9ರಂದು ವಿಠಲ ರಾಮಮೂರ್ತಿ ಹಾಗೂ ವಿ.ವಿ.ಎಸ್ ಮುರಳಿ ಅವರ ದ್ವಂದ್ವ ವಯೋಲಿನ್ ವಾದನ, ಗಾರ್ಗಿ ಶಬರಾಯರಿಂದ ಗಾಯನ ನಡೆಯಲಿದೆ. ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭದಲ್ಲಿ ಸಂಗೀತ ವಿಮರ್ಶಕ ಎ. ಈಶ್ವರಯ್ಯ, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಜಿ. ವಿಜಯ್ ಭಾಗವಹಿಸಲಿದ್ದಾರೆ. ಬಳಿಕ ಕಿರಣ್ ಸಿ. ಹೆಗ್ಡೆ ಹಾಗೂ ಮಣಿಪಾಲ ರವಿಕಿರಣ್ರಿಂದ ಕೊಳಲುವಾದನ ಹಾಗೂ ಗಾಯನ ನಡೆಯಲಿದೆ.
ಸೆ.11ರಂದು ರಾಗಧನ ಸಂಸ್ಥೆಯ ಆಶ್ರಯದಲ್ಲಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಸಂಜೆ 5 ಗಂಟೆಗೆ ಚೆನ್ನೈನ ಆರತಿ ಮತ್ತು ಅರ್ಚನಾರಿಂದ ಸಂಗೀತ ಕಚೇರಿ ನಡೆಯಲಿದೆ ಎಂದು ವಿ.ಅರವಿಂದ ಹೆಬ್ಬಾರ್ ತಿಳಿಸಿದ್ದಾರೆ.