ಕಾವೂರು: ವೈದ್ಯರ ನಿರ್ಲಕ್ಷ್ಯ ಆರೋಪ; ದೂರು
ಮಂಗಳೂರು, ಆ.29: ಮಹಿಳೆಯೊಬ್ಬರು ಉಬ್ಬಸ ಕಾಯಿಲೆಗೆ ಚಿಕಿತ್ಸೆಗೆ ತೆರಳಿದ ಸಂದರ್ಭ ವೈದ್ಯರು ನೀಡಿದ ಇಂಜೆಕ್ಷನ್ನಿಂದ ಮಹಿಳೆ ಕೋಮಾ ಸ್ಥಿತಿಗೆ ತಲುಪುವಂತಾಗಿದೆ ಎಂದು ಆರೋಪಿಸಿ ಮಹಿಳೆಯ ಪತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬೈಕಂಪಾಡಿ ಮೀನಕಳಿಯ ನಿವಾಸಿ ಮಹಿಳೆಯೊಬ್ಬರು ಕೂಳೂರಿನ ಡಾ. ಶ್ರೀಶ ಕುಮಾರ್ ಎಂಬವರ ಬಳಿ ಚಿಕಿತ್ಸೆಗೆ ತೆರಳಿದ್ದರು. ಅವರು ಮಹಿಳೆಗೆ ಮೂರು ಇಂಜೆಕ್ಷನ್ ನೀಡಿದ್ದರು. ಇಂಜೆಕ್ಷನ್ ಪಡೆದ ಮಹಿಳೆ ಬಳಿಕ ಕೋಮಾ ಸ್ಥಿತಿಗೆ ತಲುಪಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯರ ಇಂಜೆಕ್ಷನ್ ಇದಕ್ಕೆ ಕಾರಣ ಎಂದು ಪತಿ ಮಣಿಮುತ್ತು ಕಾವೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Next Story