ಎಸ್ಎಂಎ ಪುತ್ತೂರು ವಿಭಾಗದ ಅಧ್ಯಕ್ಷರಾಗಿ ಹಮೀದ್ ಹಾಜಿ ಕೊಡುಂಗಾಯಿ
ಪುತ್ತೂರು, ಆ.30: ಸುನ್ನೀ ಮ್ಯಾನೇಜ್ಮೆಂಟ್ ಅಸೋಸಿಯೇಶನ್(ಎಸ್ಎಂಎ) ಪುತ್ತೂರು ವಿಭಾಗದ ನೂತನ ಅಧ್ಯಕ್ಷರಾಗಿ ಎರಡನೇ ಬಾರಿಗೆ ಹಾಜಿ ಕೆ.ಎ ಹಮೀದ್ ಕೊಡಂಗಾಯಿ ಆಯ್ಕೆಯಾಗಿದ್ದಾರೆ.
ಅಸೋಶಿಯೇಶನ್ನ ವಾರ್ಷಿಕ ಮಹಾಸಭೆ ಗುರುವಾರ ಪುತ್ತೂರು ಸುನ್ನೀ ಸೆಂಟರ್ನಲ್ಲಿ ಜರುಗಿದ್ದು, ಈ ಸಂದರ್ಭ ನೂತನ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಪ್ರ.ಕಾರ್ಯದರ್ಶಿಯಾಗಿ ಇಬ್ರಾಹೀಂ ಸಖಾಫಿ, ಕೋಶಾಧಿಕಾರಿಯಾಗಿ ಯೂಸುಫ್ ಗೌಸಿಯಾ ಸಾಜ, ಉಪಾಧ್ಯಕ್ಷರಾಗಿ ಬದ್ರುದ್ದೀನ್ ಹಾಜಿ ಪರಪ್ಪು, ಅಬ್ದುರ್ರಹ್ಮಾನ್ ಹಾಜಿ ಅರಿಯಡ್ಕ, ಅಬ್ಬಾಸ್ ಪಟ್ಲಡ್ಕ, ಖಾದರ್ ಹಾಜಿ, ಕಾರ್ಯದರ್ಶಿಗಳಾಗಿ ಸ್ವಾದಿಕ್ ಮಾಸ್ಟರ್ ಮಲೆಬೆಟ್ಟು, ಅಶ್ರಫ್ ಸಖಾಫಿ, ಬಶೀರ್ ಮದನಿ, ಶಾಕಿರ್ ಹಾಜಿ, ಕರೀಂ ಚೆನ್ನಾವರ ಹಾಗೂ 27 ಸದಸ್ಯರ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
ಎಸ್ಎಂಎ ರಾಜ್ಯಾಧ್ಯಕ್ಷ ಸೈಯದ್ ಜಲಾಲುದ್ದೀನ್ ತಂಙಳ್ ದುಆ ನೆರವೇರಿಸಿದರು. ಪುತ್ತೂರು ವಿಭಾಗದ ಅಧ್ಯಕ್ಷ ಹಾಜಿ ಕೆ.ಎ.ಹಮೀದ್ ಕೊಡಂಗಾಯಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಪ್ರ.ಕಾರ್ಯದರ್ಶಿ ಅಬ್ದುರ್ರಹ್ಮಾನ್ ಮದನಿ ಜೆಪ್ಪುಸಭೆಯನ್ನು ಉದ್ಘಾಟಿಸಿದರು.
ರಾಜ್ಯ ಸಮಿತಿಯಿಂದ ವೀಕ್ಷಕರಾಗಿ ಆಗಮಿಸಿದ ಕೆ.ಕೆ.ಎಂ.ಕಾಮಿಲ್ ಸಖಾಫಿ ಉಪಸ್ಥಿತರಿದ್ದರು. ಎಸ್ಎಂಎ ಪುತ್ತೂರು ವಿಭಾಗ ಕಾರ್ಯದರ್ಶಿ ಇಬ್ರಾಹೀಂ ಸಖಾಫಿ ಸ್ವಾಗತಿಸಿ, ವಂದಿಸಿದರು.
ಸಭೆಯಲ್ಲಿ 235 ಮೊಹಲ್ಲಾಗಳ ಪ್ರತಿನಿಧಿಗಳು ರೀಜನಲ್ ಹಾಗೂ ರೆನಲ್ ಮುಖಾಂತರ ಆಯ್ಕೆಯಾದ ಕೌನ್ಸಿಲರ್ಗಳು ಭಾಗವಹಿಸಿದ್ದರು.