ಅಳೇಕಲ ಮದನಿ ಪ್ರೌಢಶಾಲೆಗೆ ಕುಡಿಯುವ ನೀರಿನ ಘಟಕ ಕೊಡುಗೆ
ಉಳ್ಳಾಲ, ಆ. 30: ಮಂಗಳೂರು ರಾಮಕೃಷ್ಣ ಮಿಷನ್ ವತಿಯಿಂದ ನಡೆಯುವ "ಸ್ವಚ್ಛ ಮಂಗಳೂರು ಅಭಿಯಾನ" ದ ಪ್ರಯುಕ್ತ ಉಳ್ಳಾಲದ ಅಳೇಕಲ ಮದನಿ ಪ್ರೌಢಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ಕೊಡುಗೆಯನ್ನು ನೀಡಲಾಯಿತು.
ಸಂಸ್ಥೆಯ ಕಾರ್ಯದರ್ಶಿ ಪಂಡಿತ್ ಮೊಹಮ್ಮದ್ ಘಟಕಕ್ಕೆ ಚಾಲನೆ ನೀಡಿದರು.
ಈ ಸಂದರ್ಭ ಪ್ರೌಢಶಾಲಾ ವಿಭಾಗದ ಸಂಚಾಲಕ ಯು.ಎನ್ ಇಬ್ರಾಹಿಂ ಉಪಸ್ಥಿತರಿದ್ದರು. ಪ್ರೌಢಶಾಲಾ ವಿಭಾಗದ ಅಧ್ಯಾಪಕ ಪಿ.ಡಿ. ಶೆಟ್ಟಿ ಸ್ವಾಗತಿಸಿದರೆ, ಅಧ್ಯಾಪಕಿ ಪ್ರಜ್ಞಾ ವಂದಿಸಿದರು.
Next Story