ಮಲ್ಪೆ: ತಾಯಿ ಮನೋರಮಾ ಜೊತೆ ಪ್ರಮೋದ್ ಮತದಾನ
ಉಡುಪಿ, ಆ.31: ಉಡುಪಿ ನಗರಸಭೆ ಚುನಾವಣೆಯಲ್ಲಿ ಮಾಜಿ ಸಚಿವ ಪ್ರಮೋದ್ ಮದ್ವರಾಜ್ ಮಲ್ಪೆ ಕೊಳ ವಾರ್ಡ್ ಸಂಖ್ಯೆ ಒಂದರ ಮಲ್ಪೆ ಮಹಾತ್ಮ ಗಾಂಧೀ ಶತಾಬ್ದಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿರುವ ಮತದಾನ ಕೇಂದ್ರಕ್ಕೆ ತಾಯಿ, ಮಾಜಿ ಸಚಿವೆ ಮನೋರಮಾ ಮಧ್ವರಾಜ್ ಅವರೊಂದಿಗೆ ಆಗಮಿಸಿ ಮತದಾನ ಮಾಡಿದರು.
ಬಳಿಕ ಮಾತನಾಡಿದ ಪ್ರಮೋದ್ ಮಧ್ವರಾಜ್, ವಿಧಾನಸಭಾ ಚುನಾವಣೆ ಯಲ್ಲಿ ಬಿಜೆಪಿ ಅಪಪ್ರಚಾರದಿಂದ ಜನ ಭಿನ್ನವಾಗಿ ಮತದಾನ ಮಾಡಿದ್ದಾರೆ. ಈಗಿನ ಜನಪ್ರತಿನಿಧಿಗಳ ಬಗ್ಗೆ ಜನ ಭ್ರಮ ನಿರಶನಗೊಂಡಿದ್ದಾರೆ. ಉಡುಪಿ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಉತ್ತಮ ಫಲಿತಾಂಶ ಬರುತ್ತದೆ. ಯಾವುದನ್ನು ಚಾಲೆಂಜ್ ಆಗಿ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದರು.
ನಾವು ಸೇವಕರು ಹೀಗಾಗಿ ಸವಾಲು ಪ್ರತಿಷ್ಠೆ ಅಗತ್ಯವಿಲ್ಲ. ಯಾರು ಬೇಕು ಅವರನ್ನು ಜನ ಆಯ್ಕೆ ಮಾಡು ತ್ತಾರೆ. ನನ್ನನ್ನ ತಿರಸ್ಕಾರ ಮಾಡಿರುವುದಕ್ಕೆ ಕಿಂಚಿತ್ತೂ ನೋವು ಇಲ್ಲ. ಜನಾದೇಶಕ್ಕೆ ನಾವೆಲ್ಲರೂ ತಲೆಬಾಗಬೇಕು. ಒಬ್ಬ ವ್ಯಕ್ತಿ, ನಾಯಕನಿಂದ ಎಲ್ಲರನ್ನು ಗೆಲ್ಲಿಸಬಲ್ಲೆ ಎಂಬ ಅಹಂ ಒಳ್ಳೆದಲ್ಲ ಎಂದು ಅವರು ತಿಳಿಸಿದರು.