ಗಾಂಜಾದಂತೆ ಆನ್ಲೈನ್ಗೇಮ್ ಮೊಬೈಲ್ ಕೂಡ ವ್ಯಸನ: ಡಾ.ಭಂಡಾರಿ
ಉಡುಪಿ, ಆ31: ಮೊಬೈಲ್ಗಳಿಂದಾಗಿ ಒಳ್ಳೆಯದೂ ಇದೆ, ಕೆಟ್ಟದ್ದೂ ಇದೆ. ಒಳ್ಳೆಯದು ಯಾವುದು ಕೆಟ್ಟದ್ದು ಯಾವುದು ಎಂಬುದು ಮೊಬೈಲ್ ಬಳಸುವ ವರಿಗೆ ಸ್ಪಷ್ಟವಾಗಿ ತಿಳಿದಿರಬೇಕು. ಮೊಬೈಲ್ಗಳಲ್ಲಿನ ಆನ್ಲೈನ್ ಗೇಮ್ಗಳು ಇಂದು ಇತರ ವ್ಯಸನದಂತೆ ವ್ಯಸನವಾಗಿ ಪರಿಣಮಿಸುತ್ತಿರುವುದು ದುರಂತ ಎಂದು ಮನೋತಜ್ಞ ಡಾ.ಪಿ.ವಿ.ಭಂಡಾರಿ ಕಳವಳ ವ್ಯಕ್ತಪಡಿಸಿದ್ದಾರೆ.
ಉಡುಪಿಯ ಬೀಡಿನಗುಡ್ಡೆಯಲ್ಲಿ ಇತ್ತೀಚೆಗೆ ನಡೆದ ಜನಪರ ಚಿಂತನ ವೇದಿಕೆಯ ಆಗಸ್ಟ್ ತಿಂಗಳ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ‘ಸಾಮಾ ಜಿಕ ಜಾಲತಾಣಗಳು: ಸಮಸ್ಯೆ ಮತ್ತು ಪರಿಹಾರ ಎಂಬ ವಿಷಯದ ಕುರಿತು ಮಾತನಾಡುತ್ತಿದ್ದರು.
ಆನ್ಲೈನ್ ಗೇಮ್ ವ್ಯಸನ ಯಾವ ವಯಸ್ಸಿನಲ್ಲೂ ಯಾರಿಗೆ ಬೇಕಾದರೂ ಬರಬಹುದು. ಮೆದುಳನ್ನು ಆಕರ್ಷಿಸಬಲ್ಲ ನಿರ್ಧಿಷ್ಟ ಬಣ್ಣಗಳನ್ನು ಕೂಡಾ ಕೆಲವು ಕಂಪೆನಿಗಳು ಮೊಬೈಲ್ ಬಳಕೆ ಮಾಡುವವರನ್ನು ಸೆಳೆಯುವ ಸಲುವಾಗಿ ಆಯ್ಕೆ ಮಾಡಿಕೊಂಡು ಉಪಯೋಗಿಸುತ್ತವೆ. ಎಲ್ಲದರ ಪರಿಣಾಮವಾಗಿ ಗಾಂಜಾ, ಮದ್ಯ, ಸಿಗರೇಟಿನಂತೆ ಸೈಕೋ ಆಕ್ಟಿವಿಟಿಗೆ ಬೇಕಾದಂಥ ಗುಣವನ್ನು ಮೊಬೈಲ್ ಆನ್ಲೈನ್ ಗೇಮ್ಗಳ ಮೂಲಕ ಸೃಷ್ಟಿಸಲಾಗಿದೆ ಎಂದು ಅವರು ತಿಳಿಸಿದರು.
ಹೆತ್ತವರು, ಹಿರಿಯರು ಮೊಬೈಲ್ ಬಳಕೆ ಮಾಡುವುದನ್ನು ನಿರ್ಧಿಷ್ಟ ಸಮಯಕ್ಕೆ ನಿಗದಿಗೊಳಿಸಬೇಕು. ಹದಿನೆಂಟು ವಯಸ್ಸು ಆಗುವವರೆಗೆ ಮಕ್ಕಳು ವಾಟ್ಸಾಪ್, ಪೇಸ್ಬುಕ್ ಇತ್ಯಾದಿಗಳ ಕಡೆಗೆ ಗಮನ ಕೊಡದಂತೆ ನೋಡಿಕೊಳ್ಳ ಬೇಕು. ಪಠ್ಯಕ್ಕೆ ಪೂರಕವಾದ ಮಾಹಿತಿಗಳನ್ನು ತಿಳಿದುಕೊಳ್ಳಲು ಮಾತ್ರವೇ ಇರುವಂಥ ಪ್ರತ್ಯೇಕವಾದ ಗೂಗಲ್ಗಳನ್ನು ಮೊಬೈಲ್ಗೆ ಅಳವಡಿಸಬೇಕು ಎಂದು ಅವರು ಸಲಹೆ ನೀಡಿದರು.
ಜನಪರ ಚಿಂತನ ವೇದಿಕೆಯ ಅಧ್ಯಕ್ಷ ಪ್ರಕಾಶ ಪೂಜಾರಿ ಅಧ್ಯಕ್ಷತೆ ವಹಿಸಿ ದ್ದರು. ಗೌರವಾಧ್ಯಕ್ಷ ಶ್ರೀರಾಮ ದಿವಾಣ ಪ್ರಸ್ತಾವನೆಗೈದರು. ಅಕ್ಷತಾ ವಿಶ್ವನಾಥ್ ಸ್ವಾಗತಿಸಿದರು. ಸುಜಾತಾ ಪ್ರಕಾಶ ಪೂಜಾರಿ ವಂದಿಸಿದರು. ಸುಮಾ ಜಿ.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.