ಹೆಬ್ರಿ, ಆ.31: ಶಿವಪುರ ಗ್ರಾಮದ ದೇವಸ್ಥಾನಬೆಟ್ಟುವಿನ ಅನಿಲ್ ಕುಮಾರ್ (37) ಎಂಬವರು ಆ. 26ರಂದು ರಾತ್ರಿ ಮನೆಯಿಂದ ಕೆಲಸಕ್ಕೆ ಹೊರಟು ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಬಳಿಯ ಸುಗಮ ಸಂಸ್ಥೆಗೆ ಸೇರಿದ ಲಾರಿಯಲ್ಲಿ ಸರಕನ್ನು ತುಂಬಿಸಿಕೊಂಡು ಬೆಂಗಳೂರಿಗೆ ಹೋದವರು ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.