ಉಳ್ಳಾಲ: ಕೆ.ಪಿ.ಇಸ್ಮಾಯೀಲ್ ಸ್ಮರಣಾರ್ಥ ಪ್ರತಿಭಾ ಪುರಸ್ಕಾರ
ಉಳ್ಳಾಲ, ಆ.31: ಶಿಕ್ಷಣ ಕ್ಷೇತ್ರದಲ್ಲಿ ವಿಶೇಷವಾಗಿ ನಗರದ ಕಸಬಾ ಬೆಂಗರೆಯಲ್ಲಿ ಶೈಕ್ಷಣಿಕ ಕ್ರಾಂತಿಯ ಅಲೆಯೆಬ್ಬಿಸಿದ್ದ ಕೆ.ಪಿ. ಇಸ್ಮಾಯಿಲ್ರ ನೆನೆಪಿನಲ್ಲಿ ಎಸ್ಐಒ ಉಳ್ಳಾಲ ಘಟಕವು ಎಸೆಸೆಲ್ಸಿ, ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಅತಿಥಿಗಳಾಗಿ ಎಸ್ಐಒ ರಾಷ್ಟ್ರೀಯ ಕಾರ್ಯದರ್ಶಿ ಲಾಬೀದ್ ಅಲಿಯಾ, ಜಮಾಅತೇ ಇಸ್ಲಾಮಿ ಘಟಕಾಧ್ಯಕ್ಷ ಅಬ್ದುಲ್ ಕರೀಂ, ಎಸ್ಐಒ ಉಳ್ಳಾಲ ಘಟಕಾಧ್ಯಕ್ಷ ಅಶೀರುದ್ದೀನ್ ಅಲಿಯಾ, ಭಾಗವಹಿಸಿದ್ದರು. ಕಾರ್ಯಕ್ರಮದ ಸಂಚಾಲಕ ನಿಝಾಮುದ್ದೀನ್ ಸ್ವಾಗತಿಸಿದರು. ಕಾರ್ಯದರ್ಶಿ ಸೈಫ್, ಮಾಧ್ಯಮ ಕಾರ್ಯದರ್ಶಿ ಶಾಕಿಬ್ ಕಲ್ಲಾಪು ಉಪಸ್ಥಿತರಿದ್ದರು.
Next Story