ನೆರೆ ಸಂತ್ರಸ್ತರಿಗೆ ಮತ್ಸ್ಯ ಮಾರಾಟಗಾರರು-ಏಜೆಂಟರ ಸಂಘದ ನೆರವು
ಮಂಗಳೂರು, ಸೆ. 1: ಕೇರಳ ರಾಜ್ಯ ಮತ್ತು ಕೊಡಗಿನ ನೆರೆ ಸಂತ್ರಸ್ತರಿಗಾಗಿ ಕೇರಳ ರಾಜ್ಯ ಮುಖ್ಯಮಂತ್ರಿ ದುರಂತ ಪರಿಹಾರ ನಿಧಿಗೆ 50 ಸಾವಿರ ರೂ. ಮತ್ತು ಕರ್ನಾಟಕ ರಾಜ್ಯ ಮುಖ್ಯಮಂತ್ರಿ ನೈಸರ್ಗಿಕ ವಿಪತ್ತು ಪರಿಹಾರ ನಿಧಿಗೆ 50 ಸಾವಿರ ರೂ.ನ್ನು ಮಂಗಳೂರು ಮೀನು ಮಾರಾಟ ಮತ್ತು ಕಮಿಷನ್ ಏಜೆಂಟರ ಸಂಘಯಿಂದ ದ.ಕ. ಜಿಲ್ಲಾಧಿಕಾರಿ ಮೂಲಕ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಕೆ.ಅಶ್ರಫ್, ಕೆ.ಎಂ. ಇಬ್ರಾಹೀಂ, ಅಬ್ದುಲ್ ಖಾದರ್, ಸಿ.ಎಂ. ಮುಸ್ತಫಾ ಮತ್ತು ನೌಶಾದ್ ಬಂದರ್ ಉಪಸ್ಥಿತರಿದ್ದರು. ಪರಿಹಾರ ನಿಧಿಗೆ ನೀಡಲಾದ ಚೆಕ್ನ್ನು ಅಪರ ಜಿಲ್ಲಾಧಿಕಾರಿ ಅವರಿಗೆ ಹಸ್ತಾಂತರಿಸಲಾಯಿತು.
Next Story