ಶ್ರೀಕೃಷ್ಣ ಜನ್ಮಾಷ್ಟಮಿ: ಪಚ್ಚನಾಡಿಯಲ್ಲಿ ಕವಿತಾ ಸನೀಲ್ ಅಕ್ಕಿ ವಿತರಣೆ
ಮಂಗಳೂರು, ಸೆ.1: ಪ್ರತಿವರ್ಷದಂತೆ ಈ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿಯ ಮುಂಚಿತ ದಿನವಾದ ಶನಿವಾರದಂದು ಮಾಜಿ ಮೇಯರ್ ಕವಿತಾ ಸನೀಲ್ ತಮ್ಮ ಪಚ್ಚನಾಡಿ ವಾರ್ಡ್ನಲ್ಲಿ ಬಡವರಿಗೆ ಅಕ್ಕಿ ವಿತರಿಸಿದರು.
ಪಾಲಿಕೆಯಿಂದ ತಮಗೆ ಬರುವ ಒಂದು ವರ್ಷದ ಗೌರವ ಧನ ಹಾಗೂ ತನ್ನ ಸ್ವಂತ ಹಣ ಹಾಕಿ ಅಕ್ಕಿಯನ್ನು ಖರೀದಿಸಿ ಬಡವರಿಗೆ ಹಲವಾರು ವರ್ಷಗಳಿಂದ ವಿತರಿಸುತ್ತಾ ಬಂದಿರುವುದಾಗಿ ಕವಿತಾ ಸನೀಲ್ ತಿಳಿಸಿದ್ದಾರೆ.
Next Story