ಕಲ್ಲಾಪು: ಚುನಾವಣಾ ಫಲಿತಾಂಶದ ಬೆನ್ನಲ್ಲೇ ಅಂಗಡಿಗೆ ಕಲ್ಲೆಸೆತ
ಉಳ್ಳಾಲ, ಸೆ.3: ಚುನಾವಣಾ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ಉಳ್ಳಾಲ ನಗರಸಭಾ ವ್ಯಾಪ್ತಿಯ ಕಲ್ಲಾಪುವಿನಲ್ಲಿ ವಿಜಯಿ ಅಭ್ಯರ್ಥಿಯ ಕಟ್ಟಿಗೆ ಡಿಪೋದ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ವರದಿಯಾಗಿದೆ.
ಕಲ್ಲಾಪು ವಾರ್ಡ್ನಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಉಸ್ಮಾನ್ ಕಲ್ಲಾಪು ಅವರು ಸೋಲುಂಡಿದ್ದಾರೆ. ಅವರ ವಿರುದ್ಧ ಪಕ್ಷೇತರ ಅಭ್ಯರ್ಥಿ ಮುಶ್ತಾಕ್ ಪಟ್ಲ ಎಂಬವರು ಗೆಲುವು ಸಾಧಿಸಿದ್ದಾರೆ. ಈ ಸಂದರ್ಭ ಕಲ್ಲಾಪುವಿನಲ್ಲಿರುವ ಮುಶ್ತಾಕ್ ಪಟ್ಲ ಅವರ ಕಟ್ಟಿಗೆ ಡಿಪೋದ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಘಟನೆಯ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದಾರೆ.
Next Story