ಉಡುಪಿ ನಾಗರಿಕ ಸಮಿತಿಯಿಂದ 10 ಸಾವಿರ ಚಕ್ಕುಲಿ ವಿತರಣೆ
ಉಡುಪಿ, ಸೆ.3: ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಹಾಗೂ ಬ್ರಹ್ಮಗಿರಿ ಲಯನ್ಸ್ ಕ್ಲಬ್ ವತಿಯಿಂದ ವೃಂದಾವನಸ್ಥರಾದ ಶಿರೂರು ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ಸ್ಮರಣಾರ್ಥ ಭಕ್ತರಿಗೆ ಉಚಿತ ಚಕ್ಕುಲಿ ಹಾಗೂ ಲಡ್ಡನ್ನು ವಿಟ್ಲಪಿಂಡಿಯ ದಿನವಾದ ಇಂದು ನಗರದ ಚಿತ್ತರಂಜನ್ ಸರ್ಕಲ್ ಬಳಿಯ ಸಮಿತಿು ಕಛೇರಿ ಎದುರು ವಿತರಿಸಲಾಯಿತು.
ಶಿರೂರು ಸ್ವಾಮೀಜಿಯ ಪೂರ್ವಾಶ್ರಮದ ಸಹೋದರ ಲಾತವ್ಯ ಆಚಾರ್ಯ ಭಕ್ತರಿಗೆ ಚಕ್ಕುಲಿ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೌಂಟರಿನಲ್ಲಿಯೇ ಸಂತೆಕಟ್ಟೆಯ ಶಂಕರ ನಾಯಕ್ ತಂಡವು ಚಕ್ಕುಲಿಗಳ ತಯಾರಿಸಿತು. ಸೇವಕ ಭಾಸ್ಕರ್ ದೇವಾಡಿಗ ಕುಂಜಿಬೆಟ್ಟು ಲಡ್ಡುಗಳನ್ನು ನೀಡಿ ಸಹಕರಿಸಿದರು. ಸುಮಾರು ಹತ್ತು ಸಾವಿರಕ್ಕೂ ಅಧಿಕ ಭಕ್ತರು ಚಕ್ಕುಲಿ ಹಾಗೂ ಲಡ್ಡುಗಳನ್ನು ಸ್ವಿಕರಿಸಿದರು.
ಈ ಸಂಧರ್ಭದಲ್ಲಿ ಎಂ.ನಾಗೇಶ್ ಹೆಗ್ಡೆ, ಲಾತವ್ಯ ಆಚಾರ್ಯ, ಜಯಕರ ಶೆಟ್ಟಿ ಇಂದ್ರಾಳಿ, ರಂಜನ್ ಕಲ್ಕೂರ ಅಂಬಾಗಿಲು, ಲಯನ್ಸ್ ಅಧ್ಯಕ್ಷ ಸಿ.ಎಸ್. ರಾವ್, ಪದಾಧಿಕಾರಿಗಳಾದ ವಾಸುದೇವ್ ಚಿತ್ಪಾಡಿ, ವಾದಿರಾಜ ರಾವ್, ದಿನಕರ ಪೂಂಜಾ, ಉಮೇಶ್ ನಾಯ್ಕ್, ನಾಗರಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ಸದಸ್ಯ ತಾರಾನಾಥ್ ಮೇಸ್ತ ಉಪಸ್ಥಿತರಿದ್ದರು.