ಸಾಹಿತ್ಯ ಚಿಗುರು ಕವನ ಸ್ಪರ್ಧೆ ಫಲಿತಾಂಶ: ಮಂಗಳೂರಿನ ಮಿಸ್ರಿಯಾ ಪಜೀರ್ ಪ್ರಥಮ
ಮಂಗಳೂರು, ಸೆ.3: ಸಾಹಿತ್ಯ ಚಿಗುರು ಸಾಹಿತಿಗಳ ಬಳಗ ಇತ್ತೀಚೆಗೆ ಹಮ್ಮಿಕೊಂಡಿದ್ದ ಆನ್ಲೈನ್ ಕವನ ಸ್ಪರ್ಧೆಯಲ್ಲಿ ಮಂಗಳೂರಿನ ಮಿಸ್ರಿಯಾ ಐ ಪಜೀರ್ ಪ್ರಥಮ, ಕೊಪ್ಪಳದ ಮುಕುಂದ ಅಮೀನಗಢ ದ್ವಿತೀಯ ಮತ್ತು ಕೋಲಾರದ ರಾಮಚಂದ್ರಪ್ಪ ದುರ್ಗ ತೃತೀಯ ಬಹುಮಾನ ಗಳಿಸಿದ್ದಾರೆ.
ಆನ್ಲೈನ್ ಕವನ ಸ್ಪರ್ಧೆಯೆಂಬ ವಿಶಿಷ್ಟ ಪರಿಕಲ್ಪನೆಯಲ್ಲಿ ‘ನೀರೊಳಗೆ ಕಣ್ಣೀರು’ ಎಂಬ ವಿಷಯದ ಮೇಲೆ ಕವನ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಕವನದ ವಿಷಯವನ್ನು ವಾಟ್ಸ್ಆ್ಯಪ್ ಮೂಲಕ ನೀಡಿ ಎರಡು ಗಂಟೆಗಳೊಳಗಾಗಿ ಕವನವನ್ನು ಬರೆದು ವಾಟ್ಸ್ಆ್ಯಪ್ ಮೂಲಕ ಕಳುಹಿಸಲು ಸ್ಪರ್ಧಾರ್ಥಿಗಳಿಗೆ ಕೋರಲಾಗಿತ್ತು.
ರಾಜ್ಯದ ವಿವಿದೆಡೆಯಿಂದ ಸುಮಾರು 40 ಮಂದಿ ಕವಿಗಳು ಭಾಗವಹಿಸಿದ್ದರು ಎಂದು ಬಳಗದ ಸಂಚಾಲಕ ಯೆನಪೊಯ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ನಿಯಾಝ್ ಪಡೀಲ್ ತಿಳಿಸಿದ್ದಾರೆ.
ಬೆಂಗಳೂರಿನ ಶಕೀನಾ ಬೇಗಂ, ಬಂಟ್ವಾಳದ ಎಂ.ಡಿ. ಮಂಚಿ ಮತ್ತು ವಿಜಯಪುರದ ಬಸವರಾಜ್ ಪೂಜಾರ್ ತೀರ್ಪುಗಾರರಾಗಿ ಸಹಕರಿಸಿದರು.
Next Story