‘ಒಸರ್’ ವಚನಕಾರರ ಪಡಿಯಚ್ಚು : ನಾಗೇಶ್ ಕಲ್ಲೂರ್
ಮಂಗಳೂರು, ಸೆ.4:‘ ಒಸರ್’ ಕೃತಿಕಾರರು ಶರಣ ಸಾಹಿತ್ಯ ರಚನೆ ಮಾಡಿದ ವಚನಕಾರರ ಪಡಿಯಚ್ಚಿನ ನೆಲೆಯಲ್ಲಿ ಸಂವೇದನೆ ನೀಡಿದವರು ಎಂದು ಆಕೃತಿ ಪ್ರಕಾಶನದ ಕಲ್ಲೂರ್ ನಾಗೇಶ್ ಹೇಳಿದರು.
ಮಂಗಳೂರು ಆಕಾಶವಾಣಿಯ ತುಳು ವಿಭಾಗದ ‘ಸ್ವರ ಮಂಟಮೆ’ ನೇರ ಪ್ರಸಾರದಲ್ಲಿ ಶನಿವಾರ ಚೇತನ್ ವರ್ಕಾಡಿಯ ‘ಒಸರ್’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು
ಅವರ ಕತೆಗಳು ತಳಸ್ಪರ್ಶಿ ಸಂವೇದನೆಯ ಗೊಂಚಲಾಗಿ ಸಾಮಾನ್ಯನೊಬ್ಬ ಸಾಹಿತ್ಯ ರಚಿಸಲು ಶಕ್ತ ಎನ್ನುವಂತೆ ಕೃತಿಕಾರರ ಸಾಧನೆ ಮೆಚ್ಚುವಂತದ್ದು. ಅನುಭವ ಮಂಟಪದಲ್ಲಿ ಅಂಬಿಗ ವೃತ್ತಿಯ, ಅಕ್ಕಿ ಆಯುವ ಶರಣರಿಂದ ವಚನ ರಚನೆಯಾಗಿ ಅದ್ಭುತ ಕೊಡುಗೆ ನೀಡಿದ್ದಾರೆ. ಚೇತನ್ ಕೂಡಾ ಆ ನೆಲೆಯಲ್ಲಿ ಕಾವ್ಯಸೃಷ್ಟಿಗೆ ತೊಡಗಿದ ಉದಯೋನ್ಮುಖಕ ಎಂದು ಕಲ್ಲೂರು ನಾಗೇಶ್ ನುಡಿದರು.
ಕಾರ್ಯಕ್ರಮದಲ್ಲಿ ಉದ್ಯಮಿ ಅಶ್ವಿತ್ ಪೂಜಾರಿ ಲಾಲ್ಬಾಗ್, ಸಾಹಿತಿ ಮಹೇಂದ್ರನಾಥ ಸಾಲೆತ್ತೂರು, ಸದಾನಂದ ನಾರಾವಿ, ಚಂದ್ರಹಾಸ ಕಣಂತೂರು, ವಿಜಯಕುಮಾರ್ ಪಾವಳ, ಆಶಾ ದಿಲೀಪ್ ಸುಳ್ಯಮೆ, ಉಮೇಶ್ನಾಯ್ಕಿ, ಪ್ರಶಾಂತ್ ಕಲ್ಲೂರ್ ಕೃತಿ ಬಗ್ಗೆ ಮಾತನಾಡಿದರು.
ಕೃತಿಕಾರ ಚೇತನ್ ವರ್ಕಾಡಿ, ಬಾಲಕೃಷ್ಣ ಶೆಟ್ಟಿ, ಲೋಕೇಶ್ ಪಾವಳ, ಸೀತಾರಾಮ ಬೇರಿಂಜ, ಸುಧಾಕರ ಕಲ್ಲೂರ್, ವಿ.ಕುಕ್ಯಾನ್ ಭಾಗವಹಿಸಿದ್ದರು. ಉದ್ಘೋಷಕರಾದ ಮೋನಿ ವಿಟ್ಲ, ತಾಂತ್ರಿಕ ವಿಭಾಗದ ರಾಧಾ ಪ್ರಭಾಕರನ್, ಶ್ರೀಪತಿ ಭಟ್, ಜ್ಞಾನಾನಂದ ಕೋಡಿಕಲ್, ಚಂದ್ರಶೇಖರ್ ಪಾಣಾಜೆ ಮತ್ತಿತರರಿದ್ದರು.
ಕಾರ್ಯಕ್ರಮ ಮುಖ್ಯಸ್ಥೆ ಉಷಾಲತಾ ಸರಪಾಡಿ ಸ್ವಾಗತಿಸಿದರು. ಡಾ.ಸದಾನಂದ ಪೆರ್ಲ ವಂದಿಸಿದರು.