ಕೊಡಗು ನೆರೆ ಸಂತ್ರಸ್ತರಿಗೆ ಜಿಎಚ್ಎಂ ಫೌಂಡೇಶನ್ನಿಂದ ನೆರವು
ಮಂಗಳೂರು, ಸೆ.7: ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಸಂತ್ರಸ್ತರಾಗಿರುವರಿಗೆ ಜಿಎಚ್ಎಂ ಫೌಂಡೇಶನ್ ಸಂಸ್ಥೆಯ ಸದಸ್ಯರು ಹಾಗೂ ಹಿತೈಷಿಗಳಿಂದ ಸಂಗ್ರಹಿಸಿದ 41 ಸಾವಿರ ರೂ. ಅನ್ನು ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಅರ್ಪಿಸಲಾಯಿತು.
ಇದಕ್ಕೆ ಸಂಬಂಧಿಸಿದ ಡಿಡಿಯನ್ನು ದ.ಕ. ಅಪರ ಜಿಲ್ಲಾಧಿಕಾರಿ ಮುಖಾಂತರ ಹಸ್ತಾಂತರಿಸಲಾಯಿತು. ಈ ಸಂದರ್ಭ ಅರಳ ಗ್ರಾಪಂ ಸದಸ್ಯ ಹಾಗೂ ಮೂಲರಪಟ್ನ ದಾರುಲ್ ಉಲೂಂ ಮದ್ರಸ ಅಧ್ಯಕ್ಷ ಎಂ.ಬಿ.ಅಶ್ರಫ್, ಜಿಎಚ್ಎಂ ಫೌಂಡೇಶನ್ ಅಧ್ಯಕ್ಷ ಮುಹಮ್ಮದ್ ಸಾಲಿ, ಹಣಕಾಸು ವಿಭಾಗದ ಮುಖ್ಯಸ್ಥ ಅಬ್ದುಲ್ ರಹಿಮಾನ್ ಆಚಾರಿಬೆಟ್ಟು, ಪ್ರಧಾನ ಕಾರ್ಯದರ್ಶಿ ಸಜೀವುದ್ದೀನ್ ಎಂ.ಎಸ್., ಮೂಲರಪಟ್ನ ದಾರುಲ್ ಉಲೂಂ ಮದ್ರಸ ಆಡಳಿತ ಸಮಿತಿಯ ಸದಸ್ಯ ಸನಾವುಲ್ಲಾ ಎಂ.ಪಿ. ಉಪಸ್ಥಿತರಿದ್ದರು.
Next Story