ನೀರುಪಾಲಾದ ಯುವಕನ ಮೃತದೇಹ ಪತ್ತೆ
ಬ್ರಹ್ಮಾವರ, ಸೆ.8: ಸೀತಾನದಿಯಲ್ಲಿ ಮೀನು ಹಿಡಿಯುತ್ತಿದ್ದ ವೇಳೆ ಆಕಸ್ಮಿಕ ವಾಗಿ ಕಾಲು ಜಾರಿ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದ ಆವರ್ಸೆ ಗ್ರಾಮದ ಕಿರಾಡಿ ನಿವಾಸಿ ರಾಮ ನಾಯ್ಕ್ ಎಂಬವರ ಮಗ ಸತೀಶ(29) ಎಂಬವರ ಮೃತದೇಹವು ಇಂದು ಬೆಳಗ್ಗೆ ಪತ್ತೆಯಾಗಿದೆ.
ಕಲ್ಲುಕೋರೆಯಲ್ಲಿ ಕೆಲಸ ಮಾಡಿಕೊಂಡಿದ್ದ ಇವರು ಸೆ.2ರಂದು ಮನೆಯ ಸಮೀಪದ ಸೀತಾನದಿಯಲ್ಲಿ ಮೀನಿಗೆ ಗಾಳ ಹಾಕಲು ಹೋದವರು ವಾಪಾಸ್ಸು ಮನೆಗೆ ಬಾರದೆ ನಾಪತ್ತೆಯಾಗಿದ್ದು, ಹುಡುಕಾಟ ನಡೆಸಿದರೂ ಪತ್ತೆಯಾಗಿರ ಲಿಲ್ಲ. ಇಂದು ಬೆಳಗ್ಗೆ ಇವರ ಮೃತದೇಹ ಶಿರೂರು ಗ್ರಾಮದ ಮೂಡುಗುಡ್ಡೆ ದೋಣಿಗುಂಡಿ ಎಂಬಲ್ಲಿ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲಿೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story