ಭಾರತ್ ಬಂದ್: ಕರವೇ ಬೆಂಬಲ
ಮಂಗಳೂರು, ಸೆ.9: ದೇಶಾದ್ಯಂತ ಸೆ.10ರಂದು ನಡೆಯಲಿರುವ ಭಾರತ್ ಬಂದ್ಗೆ ಕರ್ನಾಟಕ ರಕ್ಷಣಾ ವೇದಿಕೆ ಮಂಗಳೂರು ತಾಲೂಕು ಘಟಕ ಬೆಂಬಲ ಘೋಷಿಸಿದೆ.
ಅಂದು ನಡೆಯುವ ಭಾರತ ಬಂದ್ಗೆ ಕರ್ನಾಟಕ ರಕ್ಷಣಾ ವೇದಿಕೆ ಟಿ.ಎ. ನಾರಾಯಣ ಗೌಡರ ನೇತೃತ್ವದ ಸಂಘಟನೆ ಬೆಂಬಲ ವ್ಯಕ್ತಪಡಿಸಿದೆ. ಕೇಂದ್ರ ಸರಕಾರವು ದಿನನಿತ್ಯ ಬಳಕೆ ವಸ್ತುಗಳು, ಡೀಸೆಲ್, ಪೆಟ್ರೋಲಿಯಂ, ಅಡುಗೆ ಅನಿಲ ದರವನ್ನು ಏರಿಕೆ ಮಾಡಿ ಜನಸಾಮಾನ್ಯರ ಮೇಲೆ ಬರೆ ಎಳೆದಿದೆ. ಬಂದ್ನಲ್ಲಿ ಕರವೇ ಕಾರ್ಯಕರ್ತರು ಸಂಪೂರ್ಣವಾಗಿ ಭಾಗವಹಿಸಲಿದ್ದಾರೆ ಎಂದು ಲರವೇ ಮಂಗಳೂರು ತಾಲೂಕು ಘಟಕದ ಅಧ್ಯಕ್ಷ ಮಧುಸೂದನ ಗೌಡ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story