ಹೈವೇ ಡಿವೈಡರ್ನಲ್ಲಿ ಹಸುರೀಕರಣ: ಎಕ್ಕೂರು ಯುವಕರಿಂದ ಹೀಗೊಂದು ಸ್ವಚ್ಛ ಭಾರತ್ !
ಮಂಗಳೂರು, ಸೆ.10: ಸ್ಚಚ್ಛ ಭಾರತ್ ಅಭಿಯಾನದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಉದ್ದೇಶದಿಂದ ಎಕ್ಕೂರಿನ ಯುವಕರು ಹೈವೇಯಲ್ಲಿನ ಡಿವೈಡರ್ನ ಮಣ್ಣಿರುವ ಜಾಗಲ್ಲಿ ಹಸೀಕರಣಕ್ಕೆ ಮುಂದಾಗಿದ್ದಾರೆ.
ಎಕ್ಕೂರಿನ ಬಸ್ಸು ನಿಲ್ದಾಣದ ಬಳಿ (ಮೀನುಗಾರಿಕಾ ಕಾಲೇಜಿನ ಎದುರು)ಯ ಹೈವೇ ಡಿವೈಡರ್ನಲ್ಲಿನ ಖಾಲಿ ಜಾಗದಲ್ಲಿ ಹೂವಿನ ಗಿಡಗಳನ್ನು ನೆಟ್ಟು ಅದಕ್ಕೆ ಮಣ್ಣು ಹಾಕಿ ಸುಂದರಗೊಳಿಸುವ ಕಾರ್ಯವನ್ನು ಸ್ಥಳೀಯ ಹಿಂದೂ ಯುವಸೇನೆ ಕಾರ್ಯಕರ್ತರು ನಡೆಸಿದ್ದಾರೆ.
ಸುಮಾರು 25ಕ್ಕೂ ಅಧಿಕ ಯುವಕರ ತಂಡ ಡಿವೈಡರ್ನ ಖಾಲಿ ಜಾಗದಲ್ಲಿ ಬಣ್ಣ ಬಣ್ಣದ ಸುಮಾರು 40ಕ್ಕೂ ಅಧಿಕ ಹೂವಿನ ಗಿಡಗಳನ್ನು ನೆಟ್ಟು ಅದಕ್ಕೆ ಕೆಂಪು ಮಣ್ಣು ಹಾಕುವ ಕಾರ್ಯವನ್ನು ಮಾಡಿದ್ದಾರೆ.
Next Story