ಬೈಕ್ಗಳ ನಡುವೆ ಢಿಕ್ಕಿ; ಸವಾರನಿಗೆ ಗಾಯ
ಮಂಗಳೂರು, ಸೆ.10: ಎರಡು ಬೈಕ್ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಸವಾರ ಗಾಯಗೊಂಡ ಘಟನೆ ಐಕಳ ಸಮೀಪದ ಕಮ್ಮಾಜೆ ಬಳಿ ರವಿವಾರ ರಾತ್ರಿ ನಡೆದಿದೆ.
ಹಳೆಯಂಗಡಿ ನಿವಾಸಿ ಜಯಶಂಕರ್ ಗಾಯಗೊಂಡವರು ಎಂದು ಗುರುತಿಸಲಾಗಿದೆ.
ಗಾಯಾಳು ಜಯಶಂಕರ್ ಬೈಕ್ನಲ್ಲಿ ಮೂಡುಬಿದಿರೆಯಿಂದ ತಮ್ಮ ಮನೆಯಾದ ಹಳೆಯಂಗಡಿಗೆ ತೆರಳುತ್ತಿದ್ದರು. ಬೈಕ್ ಐಕಳ ಸಮೀಪದ ಕಮ್ಮಾಜೆ ಬಳಿ ತಲುಪುತ್ತಿದ್ದಂತೆ ಕಿನ್ನಿಗೋಳಿ ಕಡೆಯಿಂದ ಮೂಡುಬಿದಿರೆ ಕಡೆಗೆ ಹೋಗುತ್ತಿದ್ದ ಮತ್ತೊಂದು ಬೈಕ್ ನಿಯಂತ್ರಣ ತಪ್ಪಿ ಢಿಕ್ಕಿ ಹೊಡೆದಿದೆ.
ಪರಿಣಾಮ ಸವಾರ ಜಯಶಂಕರ್ ಬೈಕ್ ಸಮೇತ ಡಾಂಬರ್ ರಸ್ತೆಗೆಸೆಯಲ್ಪಟ್ಟು ಗಾಯಗೊಂಡಿದ್ದಾರೆ. ಗಾಯಾಳುವನ್ನು ಕೂಡಲೇ ಸುರತ್ಕಲ್ನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಈ ಕುರಿತು ಮಂಗಳೂರು ನಗರ ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story