ಮುದರಂಗಡಿ: ಯುಪಿಸಿಎಲ್ನಿಂದ ಶೌಚಾಲಯ ನಿರ್ಮಾಣ
ಉಡುಪಿ, ಸೆ.11: ಅದಾನಿ ಯುಪಿಸಿಎಲ್ ಸಿಎಸ್ಆರ್ ಯೋಜನೆಯಡಿ 7.45ಲಕ್ಷ ರೂ. ವೆಚ್ಚದಲ್ಲಿ ಮುದರಂಗಡಿ ಸಂತ ಫ್ರಾನ್ಸೀಸ್ ಕ್ಸೇವಿಯರ್ ಚರ್ಚ್ ವಠಾರದಲ್ಲಿ ನಿರ್ಮಿಸಿರುವ ಐದು ಶೌಚಾಲಯ ಬ್ಲಾಕ್ಗಳನ್ನು ಚರ್ಚ್ನ ಧರ್ಮಗುರು ಫಾ. ಕ್ಸೇವಿಯರ್ ಲೂಯಿಸ್, ಫಾ.ರಿಚರ್ಡ್ ಕ್ವಾಡ್ರಸ್, ಗ್ರಾಪಂ ಅಧ್ಯಕ್ಷ ಡೇವಿಡ್ ಡಿಸೋಜ, ಉಪಾಧ್ಯಕ್ಷೆ ಜಯಂತಿ ಪೂಜಾರ್ತಿ, ಅದಾನಿ ಕಾರ್ಯ ನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಜಂಟಿಯಾಗಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನಿಲ್ ಕುಮಾರ್, ಗ್ರಾಪಂ ಸದಸ್ಯರಾದ ಸುಕುಮಾರ್ ಶೆಟ್ಟಿ, ಶೋಭಾ ಫೆರ್ನಾಂಡಿಸ್, ಉಡುಪಿ ಕ್ರಿಶ್ಚಿಯನ್ ಸ್ತ್ರೀ ಸಂಘಟನೆಯ ಅಧ್ಯಕ್ಷೆ ಜೆನೆಟ್ ಬರ್ಬೋಾ, ಯುಪಿಸಿಎಲ್ ಸಂಸ್ಥೆಯ ಏಜಿಎಂ ಗಿರೀಶ್ ನಾವಡ, ಹಿರಿಯ ವ್ಯವಸ್ಥಾಪಕ ರವಿ ಆರ್. ಜೇರೆ, ಅದಾನಿ ಫೌಂಡೇಷನ್ನ ಸದಸ್ಯರಾದ ವಿನೀತ್ ಅಂಚನ್, ಸುಕೇಶ್ ಸುವರ್ಣ, ಅನುದೀಪ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
Next Story