ಪುತ್ತೂರು: ಬೈಕ್ ಗಳ ನಡುವೆ ಅಪಘಾತ; ನಾಲ್ವರಿಗೆ ಗಾಯ
ಪುತ್ತೂರು, ಸೆ. 11: ಬೈಕ್ಗಳ ನಡುವೆ ಢಿಕ್ಕಿ ಸಂಭವಿಸಿ ಸವಾರರು ಹಾಗೂ ಸಹ ಸವಾರೆಯರಿಬ್ಬರ ಸಹಿತ ನಾಲ್ವರು ಗಂಭೀರ ಗಾಯಗೊಂಡ ಘಟನೆ ಪುತ್ತೂರು ತಾಲೂಕಿನ ನರಿಮೊಗ್ರು ಗ್ರಾಮದ ಮುಕ್ವೆ ಎಂಬಲ್ಲಿ ಮಂಗಳವಾರ ಸಂಭವಿಸಿದೆ.
ಪುತ್ತೂರು ತಾಲ್ಲೂಕಿನ ಸರ್ವೆ ಗ್ರಾಮದ ಕಟ್ಟತ್ತಡ್ಕ ನಿವಾಸಿ ಕುಟ್ಟಿ ಎಂ.ಕೆ (50) ಮತ್ತು ಅವರ ಪುತ್ರಿ ಶರತ್ ಕುಮಾರಿ, ಇನ್ನೊಂದು ಬೈಕಿನ ಸವಾರ ನರಿಮೊಗ್ರು ಗ್ರಾಮದ ಪರಮಾರ್ಗ ನಿವಾಸಿ ಯೋಗೀಶ್ ಗೌಡ (40) ಮತ್ತು ಸಹ ಸವಾರೆ ಹರಿಣಾಕ್ಷಿ ಗಾಯಗೊಂಡವರು.
ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Next Story