ಮೂಳೂರು ಜಬ್ಬಾರ್ ಮಸ್ತಾನ್ ಉಪ್ಪಾಪ ನಿಧನ
ಉಡುಪಿ, ಸೆ. 13: ಮೂಳೂರು ಜಬ್ಬಾರ್ ಮಸ್ತಾನ್ ಉಪ್ಪಾಪ (75) ಅವರು ಅಲ್ಪಕಾಲದ ಅಸೌಖ್ಯದಿಂದ ಗುರುವಾರ ಸಂಜೆ ಮೂಳೂರಿನಲ್ಲಿ ನಿಧನರಾದರು.
ಅವರು ಅಬ್ದುಲ್ ಖಾದರ್ ಜಬ್ಬಾರ್ ಮಸ್ತಾನ್ ಎಂದೇ ಖ್ಯಾತರಾಗಿದ್ದರು. ಮೃತರ ಅಂತಿಮ ಸಂಸ್ಕಾರವು ಶುಕ್ರವಾರ ಬೆಳಗ್ಗೆ 11 ಗಂಟೆಯ ಸುಮಾರಿಗೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಸಂತಾಪ
ಸೂಫೀ ವರ್ಯರಾದ ಅಬ್ದುಲ್ ಖಾದಿರ್ ಜಬ್ಬಾರ್ ಮಸ್ತಾನ್ ಮೂಳೂರು ಇವರ ನಿಧನವು ಸಮುದಾಯಕ್ಕೆ ಬಹಳ ದುಃಖ ತಂದಿದೆ. ಇವರ ಹೆಸರಲ್ಲಿ ಸರ್ವ ಮೊಹಲ್ಲಾಗಳಲ್ಲಿ ಮಯ್ಯಿತ್ ನಮಾಝ್ ಹಾಗೂ ಪ್ರತ್ಯೇಕ ಪ್ರಾರ್ಥಿಸಬೇಕಾಗಿ ಕರ್ನಾಟಕ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಶೈಖುನಾ ಖಾಝಿ ಪಿ.ಎಮ್. ಇಬ್ರಾಹಿಮ್ ಮುಸ್ಲಿಯಾರ್ ಬೇಕಲ, ಉಡುಪಿ ಜಿಲ್ಲಾ ಸುನ್ನಿ ಸಂಘಟನೆಗಳ ಒಕ್ಕೂಟ ಅಧ್ಯಕ್ಷ ಬಿ.ಕೆ. ಅಬ್ದುರ್ರಹ್ಮಾನ್ ಮದನಿ ಮೂಳೂರು, ಜಿಲ್ಲಾ ಸುನ್ನೀ ಉಲಮಾ ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ಅಶ್ರಫ್ ಸಖಾಫಿ ಕನ್ನಂಗಾರ್, ಜಿಲ್ಲಾ ಎಸ್ ವೈ ಎಸ್ ಅಧ್ಯಕ್ಷ ಅಸ್ಸಯ್ಯಿದ್ ಜಅಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ, ಜಿಲ್ಲಾ ಸುನ್ನಿ ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ತೌಫೀಕ್ ಅಬ್ದುಲ್ಲ ನಾವುಂದತ್ಲ್, ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಅಶ್ರಫ್ ಅಂಜದಿ, ಸುನ್ನಿ ಸಂಘಟನೆಗಳ ನಾಯಕರಾದ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ವಿನಂತಿಸಿದ್ದಾರೆ.