ಮೂಡುಬಿದಿರೆ ಹೋಟೆಲ್ ಪಂಚರತ್ನದಲ್ಲಿ ತನಿಷ್ಕ್ ಆಭರಣ ಪ್ರದರ್ಶನ, ಮಾರಾಟ
ಮೂಡುಬಿದಿರೆ, ಸೆ. 15: ಸೌಂದರ್ಯಪ್ರಜ್ಞೆಯೊಂದಿಗೆ ಚಿನ್ನ, ವಜ್ರ, ವೈಢೂರ್ಯಗಳ ಆಭರಣಗಳ ಕುರಿತಾಗಿ ವಿಶೇಷ ಒಲವನ್ನು ಹೊಂದಿದವರು ಮಹಿಳೆಯರು. ಬದುಕಿನ ಭದ್ರತೆಗಾಗಿ ಭಾರತೀಯರು ವಿಶೇಷವಾಗಿ ಮಹಿಳೆಯರು ಉತ್ಪಾದನೆ, ಮಾರಾಟ ಮತ್ತು ಸೇವೆಯಲ್ಲಿ ಗುಣಮಟ್ಟವನ್ನು ಕಾಪಾಡಿಕೊಂಡು ಬಂದಿರುವ `ಟಾಟಾ' ಕಂಪೆನಿಯ ಅಂಗಸಂಸ್ಥೆಯಾಗಿರುವ `ತನಿಷ್ಕ್ ' ತನ್ನ ಉತ್ಕೃಷ್ಟ ಆಭರಣಗಳ ತಯಾರಿ, ಮಾರಾಟದಲ್ಲಿ ಗುಣಮಟ್ಟಕ್ಕಾಗಿ ಹೆಸರಾಗಿದೆ. ಅತಿವೇಗದಲ್ಲಿ ಅಭಿವೃದ್ಧಿಯನ್ನು ಹೊಂದುತ್ತಿರುವ ಮೂಡುಬಿದಿರೆ ನಗರದಲ್ಲೂ ತನಿಷ್ಕ್ ಶಾಖೆ ಮೂಡಿಬರುವಂತಾಗಲಿ ಎಂದು ಮಾಜಿ ಸಚಿವ ಕೆ. ಅಭಯಚಂದ್ರ ಆಶಿಸಿದರು.
ಹೋಟೆಲ್ ಪಂಚರತ್ನ ಇಂಟರ್ನ್ಯಾಷನಲ್ನಲ್ಲಿ ಸೆ. 15ರಿಂದ 17ರವರೆಗೆ ಏರ್ಪಡಿಸಲಾಗಿರುವ `ತನಿಷ್ಕ್' ಆಭರಣಗಳ ಪ್ರದರ್ಶನ ಹಾಗೂ ಮಾರಾಟ ವ್ಯವಸ್ಥೆಯನ್ನು ಉದ್ಘಾಟಿಸಿ ಅವರು ಮಾತನಾಡಿ ಸಂಸ್ಥೆಗೆ ಶುಭ ಕೋರಿದರು.
ಇನ್ನರ್ವೀಲ್ ಮಾಜಿ ಅಧ್ಯಕ್ಷೆ ಜಯಶ್ರೀ ಅಮರನಾಥ ಶೆಟ್ಟಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, `ಈಗಿನ ತಲೆಮಾರು ಆ್ಯಂಟಿಕ್ ಜ್ಯುವೆಲ್ಲರಿಗಳ ಬಗ್ಗೆ ಒಲವು ತೋರುತ್ತಿರುವುದನ್ನು ಪ್ರಸ್ತಾಪಿಸಿ, ಅನ್ಕಟ್ ಡೈಮಂಡ್ಸ್ ಮತ್ತು ಡೈಮಂಡ್ಸ್ ಗಳಿರುವ ಆಭರಣಗಳು ಹೆಚ್ಚು ಜನಪ್ರಿಯವಾಗುತ್ತಿವೆ' ಎಂದರು.
ಮುಖ್ಯ ಅತಿಥಿಗಳಾಗಿ ಬಿಜೆಪಿ ದ.ಕ. ಜಿಲ್ಲಾ ಉಪಾಧ್ಯಕ್ಷ ಕೆ. ಪಿ. ಜಗದೀಶ ಅಧಿಕಾರಿ, ಉದ್ಯಮಿ ಬಿ. ಕೀರ್ತಿವರ್ಮ, ಹೋಟೆಲ್ ಪಂಚರತ್ನದ ಆಡಳಿತ ನಿರ್ದೇಶಕ ತಿಮ್ಮಯ್ಯ ಶೆಟ್ಟಿ ಅವರು ಶುಭ ಹಾರೈಸಿದರು.
'ತನಿಷ್ಕ್' ಮಂಗಳೂರು ಮಳಿಗೆಯ ಆಡಳಿತ ನಿರ್ದೇಶಕ ಖಾದರ್ ಹಾರೂನ್ ಸ್ವಾಗತಿಸಿದರು. ಉನ್ನತ ಕೌಶಲ್ಯ, ಉತ್ಕೃಷ್ಟ ವಿನ್ಯಾಸ, ಗುಣಮಟ್ಟಕ್ಕಾಗಿ ಹೆಸರಾಗಿರುವ 'ತನಿಷ್ಕ್' ದೇಶದಲ್ಲೇ ಅತಿ ವಿಶ್ವಾಸನೀಯ ಜ್ಯುವೆಲ್ಲರಿ ಬ್ರಾಂಡ್ ಆಗಿ ಮನ್ನಣೆ ಗಳಿಸಿದೆ. 22 ಮತ್ತು 18 ಕ್ಯಾರೆಟ್ ಚಿನ್ನದ 5000 ಬಗೆಯ ಸಾಂಪ್ರದಾಯಿಕ, ಸಮಕಾಲೀನ ಮತ್ತು ಸಂಮಿಶ್ರ ಶೈಲಿಯ ಆಭರಣಗಳು, ಚಿನ್ನ, ರತ್ನ ಸೆಟ್ ಜ್ಯುವೆಲ್ಲರಿಗಳಿಗಾಗಿ ತನಿಷ್ಕ್ ಪ್ರಸಿದ್ಧವಾಗಿದೆ. ಚಿನ್ನದ ಪರಿಶುದ್ಧತೆ ಅಳೆಯುವ ಕ್ಯಾರೆಟ್ ಮೀಟರ್ಮೂಲಕ ಚಿನ್ನದ ಪರಿಶುದ್ಧತೆ ಅಳೆಯಲಾಗುತ್ತಿದೆ' ಎಂದರು.
ವಿಶೇಷ ಕೊಡುಗೆ: ಚಿನ್ನದ ಆಭರಣಗಳ ತಯಾರಿಕಾ ಶುಲ್ಕದ ಮೇಲೆ ಮತ್ತು ಡೈಮಂಡ್ ಆಭರಣಗಳ ಮೇಲೆ ನೇರವಾಗಿ ಶೇ. 10 ಕಡಿತ ಈ ಪ್ರದರ್ಶನದ ಕೊಡುಗೆಯಾಗಿದೆ ಎಂದು ಖಾದರ್ ಹಾರೂನ್ ಪ್ರಕಟಿಸಿದರು.
`ಭಾರತದಾದ್ಯಂತ 143 ನಗರಗಳಲ್ಲಿ 265 ಮಳಿಗೆಗಳನ್ನು ಹೊಂದಿರುವ 'ತನಿಷ್ಕ್' ನ ದ.ಕ. ಜಿಲ್ಲೆಯ ಏಕಮಾತ್ರ ಶಾಖೆಯು ಮಂಗಳೂರಿನಲ್ಲಿ ಸೇವಾನಿರತವಾಗಿದೆ. ಶೀಘ್ರದಲ್ಲೇ ಇನ್ನೊಂದು ಶಾಖೆಯನ್ನು ತೆರೆಯಲು ಯೋಜಿಸಲಾಗುತ್ತಿದೆ' ಎಂದು ಅವರು ತಿಳಿಸಿದರು.
ಸ್ಟೋರ್ ಮ್ಯಾನೇಜರ್ ಅಕ್ಷಯ್ ಸಹಿತ ಮಂಗಳೂರು ತನಿಷ್ಕ್ ಸಿಬ್ಬಂದಿ ಉಪಸ್ಥಿತರಿದ್ದರು. ಡಿಜೆ ಶ್ಯಾಮ್ ಕಾರ್ಯಕ್ರಮ ನಿರೂಪಿಸಿದರು.