‘ತುಳುನಾಡೋಚ್ಚಯ-2018’ದ ಸ್ವಾಗತ ಸಮಿತಿ ರಚನೆ
ಮಂಗಳೂರು, ಸೆ.17: ತುಳುನಾಡಿನ ಸಂಸ್ಕೃತಿಯು ಜಗತ್ತಿಗೆ ಮಾದರಿಯಾಗಿದೆ. ಇಲ್ಲಿನ ಆಚಾರ-ವಿಚಾರ ಅದ್ಭುತ. ತುಳು ಅಂದರೆ ಕೇವಲ ಭಾಷೆಯಲ್ಲ. ಅದೊಂದು ಅನನ್ಯತೆಯ ಪ್ರತಿಬಿಂಬ. ಅದರಲ್ಲಿ ಅಡಗಿರುವ ಸಂಸ್ಕೃತಿಯನ್ನು ಗಟ್ಟಿಗೊಳಿಸುವುದು ತುಳುನಾಡೋಚ್ಚಯದ ಮುಖ್ಯ ಉದ್ದೇಶವಾಗಿದೆ ಎಂದು ಅಪ್ಪಣ್ಣ ಹೆಗ್ಡೆ ಬಸ್ರೂರು ಅಭಿಪ್ರಾಯಪಟ್ಟರು.
ಬಸ್ರೂರಿನ ನಿವೇದಿತಾ ಫ್ರೌಢಶಾಲೆಯಲ್ಲಿ ಇತ್ತೀಚೆಗೆ ನಡೆದ ತುಳುನಾಡೋಚ್ಚಯದ ಸ್ವಾಗತ ಸಮಿತಿ ರಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಡಾ. ಕನರಾಡಿ ವಾದಿರಾಜ್ ಭಟ್, ತುಳುವೆರೆ ಆಯನೊ ಕೂಟ ಕುಡ್ಲದ ಗೌರವಾಧ್ಯಕ್ಷ ಡಾ. ಆರೂರು ಪ್ರಸಾದ್ ರಾವ್, ವಿಶ್ವ ತುಳುವೆರೆ ಆಯನೊ ಕೂಟದ ಸಂಚಾಲಕ ಡಾ. ರಾಜೇಶ ಆಳ್ವ , ತುಳುವೆರೆ ಆಯನೊ ಕೂಟ ಕುಡ್ಲದ ಅಧ್ಯಕ್ಷ ದಯಾನಂದ ಕತ್ತಲ್ಸಾರ್ ಮಾತನಾಡಿದರು.
ಸಭೆಯಲ್ಲಿ ತುಳುವೆರೆ ಆಯನೊ ಕೂಟ ಕಾಸರಗೋಡಿನ ಗೌರವಾಧ್ಯಕ್ಷ ಪ್ರೊ.ಎ.ಶ್ರೀನಾಥ್, ಕಾಲೇಜಿನ ನಿವೃತ್ತ ಎಚ್ಒಡಿ ಪ್ರೊ. ಜಗದೀಶ್, ನಿವೃತ್ತ ಬಿಇಒ ಗೋಪಾಲ್ ಶೆಟ್ಟಿ, ಯು.ಎಸ್. ಶೆಣೈ, ತಾಪಂ ಸದಸ್ಯ ರಾಮಕಿಶನ್ ಹೆಗ್ಡೆ, ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ರಾಧಾಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.
ಪ್ರಾಧ್ಯಾಪಕ ದಿನಕರ ಶೆಟ್ಟಿ ಸ್ವಾಗತಿಸಿದರು. ಅಖಿಲ ಭಾರತ ತುಳು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ನಿಟ್ಟೆ ಶಶಿಧರ ಶೆಟ್ಟಿ ವಂದಿಸಿದರು.