ಭಟ್ಕಳ: ದೈಹಿಕ ಶಿಕ್ಷಣ ಪರಿವೀಕ್ಷ ಶ್ರೀಕಾಂತ್ ನಾಯಕರಿಗೆ ಸನ್ಮಾನ
ಭಟ್ಕಳ, ಸೆ. 17: ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ದೈಹಿಕ ಶಿಕ್ಷಣ ಪರಿವೀಕ್ಷಕರಾಗಿ ಕಳೆದ ಮೂರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶ್ರೀಕಾಂತ್ ನಾಯಕರಿಗೆ ಸೋಮವಾರ ಬೆಳಕೆ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಜರಗಿದ ತಾಲೂಕು ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ತಾಲೂಕು ದೈಹಿಕ ಶಿಕ್ಷಕರ ಸಂಘದಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ್ ನಾಯ್ಕ, ಕಾರ್ಯದರ್ಶಿ ಪ್ರಕಾಶ ಶೇಟ್ ಶಿರಾಲಿ, ಮಾಜಿ ಅಧ್ಯಕ್ಷ ಎಂ.ಬಿ.ನಾಯ್ಕ, ಗೋಪಾಲ್ ನಾಯ್ಕ, ಮಹೇಶ್ ನಾಯ್ಕ, ಶೋಭಾ ನಾಯ್, ಸುಜಾತ ಗೌಡ, ಫಾರೂಖ್ ಘನಿ, ವಾಸುದೇವ ಪುಜಾರಿ, ವಸಂತ್ ಲೂಪೀಸ್ತಿತರರು ಉಪಸ್ಥಿತರಿದ್ದರು.
Next Story