ಬಿ.ಸಿ.ರೋಡ್: 'ಸಪ್ತ ಲಹರಿ ಜೇಸೀ ಸಪ್ತಾಹ-2018', ನಾಲ್ವರು ಸಾಧಕರಿಗೆ ಸನ್ಮಾನ
ಬಂಟ್ವಾಳ, ಸೆ.18: ಜೆಸಿಐ ಜೋಡುಮಾರ್ಗ ನೇತ್ರಾವತಿಯ "ಸಪ್ತ ಲಹರಿ ಜೇಸೀ ಸಪ್ತಾಹ-2018" ಕಾರ್ಯಕ್ರಮದ ಅಂಗವಾಗಿ ತಾಲೂಕಿನ ನಾಲ್ವರು ಸಾಧಕರನ್ನು ಬಿ.ಸಿ.ರೋಡ್ ರೋಟರಿ ಸಭಾಂಗಣದಲ್ಲಿ ಇತ್ತೀಚೆಗೆ ಸನ್ಮಾನಿಸಲಾಯಿತು.
ಜೆಸಿಐ ಜೋಡುಮಾರ್ಗ ಕಾರ್ಯಕ್ರಮ ವಿಭಾಗದ ಉಪಾಧ್ಯಕ್ಷ ರವೀಂದ್ರ ಕುಕ್ಕಾಜೆ ಅವರಿಗೆ 'ಕಮಲ ಪತ್ರ ಪ್ರಶಸ್ತಿ', ರಸ್ತೆ ಸಂಚಾರ ಪಾಲಕ ಡಿ.ಅಬ್ದುಲ್ ರಹ್ಮಾನ್ ಪಟೇಲ್ ಅವರಿಗೆ 'ತೆರೆಮರೆಯ ಸಾಧಕ ಪ್ರಶಸ್ತಿ', ಯುವ ಉದ್ಯಮಿ ಶ್ರೀನಿವಾಸ್ ಮೆಲ್ಕಾರ್ ಅವರಿಗೆ 'ಸಾಧನಾ ಶ್ರೀ ಪ್ರಶಸ್ತಿ' ಹಾಗೂ ಡಾ.ರಾಘವೇಂದ್ರ ಹೊಳ್ಳ ಅವರಿಗೆ 'ಉದಯೋನ್ಮುಖ ಯುವ ಪ್ರಶಸ್ತಿ' ನೀಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ಶಾಸಕ ರಾಜೇಶ್ ನಾಯ್ಕ್, ಜೆಸಿಐ ಜೋಡುಮಾರ್ಗ ನೇತ್ರಾವತಿಯ ಅಧ್ಯಕ್ಷೆ ಸವಿತಾ ನಿರ್ಮಲ್, ಪೂರ್ವಾಧ್ಯಕ್ಷ ಬಿ.ರಾಮಚಂದ್ರ ರಾವ್, ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಆಚಾರ್ಯ, ಟೌನ್ ಅಧ್ಯಕ್ಷ ಉಮೇಶ್ ನಿರ್ಮಲ್, ಸಂಜೀವ ಪೂಜಾರಿ, ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ಸುಧಾಕರ ಆಚಾರ್ಯ, ಪಿ.ಎ.ರಹೀಂ, ಅಹ್ಮದ್ ಮುಸ್ತಫ, ನವೀನ್ ಚಂದ್ರ ಶೆಟ್ಟಿ ಮುಂಡಾಜೆ, ಜಯಾನಂದ ಪೆರಾಜೆ, ಕೃಷ್ಣ ರಾಜ್ ಭಟ್, ಸತ್ಯನಾರಾಯಣ ರಾವ್, ಡಾ ರಾಘವೇಂದ್ರ ಹೊಳ್ಳ, ಪದಾಧಿಕಾರಿಗಳಾದ ಸುರೇಶ್ ಭಂಡಾರಿ, ಜ್ಯೋತೀಂದ್ರ ಪ್ರಸಾದ್ ಶೆಟ್ಟಿ, ಕಾರ್ಯದರ್ಶಿ ಹರ್ಷರಾಜ್ ಸಿ., ಜೇಸಿರೆಟ್ ವಿಭಾಗದ ಅಧ್ಯಕ್ಷೆ ಗಾಯತ್ರಿ ಲೋಕೇಶ್, ಕಾರ್ಯಕ್ರಮ ನಿರ್ದೇಶಕರಾದ ರವೀಂದ್ರ ಕುಕ್ಕಾಜೆ, ಧೀರಜ್ ಹೆಬ್ರಿ ಉಪಸ್ಥಿತರಿದ್ದರು.