ಮಂಗಳೂರು ತಾಪಂ ಇಒ ಪ್ರಭಾರ ಹುದ್ದೆಯಿಂದ ಮುಕ್ತಿ
ಮಂಗಳೂರು, ಸೆ.18:ಪಿಡಿಒಗಳಿಂದ ಲಂಚದ ಬೇಡಿಕೆಯಿಟ್ಟ ಆರೋಪ ಎದುರಿಸುತ್ತಿದ್ದ ಮಂಗಳೂರು ತಾಪಂ ಪ್ರಭಾರ ಇಒ ಸದಾನಂದ ಅವರನ್ನು ಹುದ್ದೆಯಿಂದ ಮುಕ್ತಿಗೊಳಿಸಿ ದ.ಕ.ಜಿಪಂ ಸಿಇಒ ಡಾ. ಎಂ.ಆರ್.ರವಿ ಮಂಗಳವಾರ ಆದೇಶ ಹೊರಡಿಸಿದ್ದಾರೆ.
ತಮಗೆ ಕಾರಣ ಕೇಳಿ ನೀಡಲಾದ ನೋಟಿಸ್ಗೆ ಸಲ್ಲಿಸಿದ ಲಿಖಿತ ಉತ್ತರ ಸಮರ್ಥನೀಯವಲ್ಲ. ತಮ್ಮ ದುರ್ವರ್ತನೆಗೆ ಸಮರ್ಥ ಕಾರಣಗಳನ್ನೂ ನೀಡಿಲ್ಲ. ಹಾಗಾಗಿ ತಮ್ಮನ್ನು ಹುದ್ದೆಯಿಂದ ಮುಕ್ತಿಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ತೆರವಾದ ಸದಾನಂದ ಅವರ ಪ್ರಭಾರ ಹುದ್ದೆಯನ್ನು ಮಂಗಳೂರು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದ ಸಹಾಯಕ ಕಾರ್ಯಕಾರಿ ಅಭಿಯಂತರ ಎ. ಸುಜನಚಂದ್ರ ರಾವ್ ಅವರಿಗೆ ವಹಿಸಲಾಗಿದೆ.
Next Story