ಅಡ್ಯಾರ್: ಕಾರು ಪಲ್ಟಿ; ವೈದ್ಯರಿಗೆ ಗಾಯ
ಮಂಗಳೂರು, ಸೆ.20: ರಾಷ್ಟ್ರೀಯ ಹೆದ್ದಾರಿಯ ಅಡ್ಯಾರ್ ಕಣ್ಣೂರು ಬಳಿ ಬುಧವಾರ ರಾತ್ರಿ ಸುಮಾರು 2:40ರ ವೇಳೆಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ವೈದ್ಯರೊಬ್ಬರು ಗಾಯಗೊಂಡ ಘಟನೆ ನಡೆದಿದೆ.
ಫರಂಗಿಪೇಟೆ ಕಡೆಯಿಂದ ಮಂಗಳೂರಿಗೆ ಕಾರಿನಲ್ಲಿ ಬರುತ್ತಿದ್ದಾಗ ನಾಯಿಯೊಂದು ಅಡ್ಡ ಬಂತು. ಅಪಘಾತ ತಪ್ಪಿಸಲು ಚಾಲಕ ಡಾ. ಮುಕುಂದ್ ಒಮ್ಮೆಲೆ ಎಡಬದಿಗೆ ತಿರುಗಿಸಿದ ಕಾರಣ ನಿಯಂತ್ರಣ ತಪ್ಪಿದ ಕಾರು ಉಕ್ಕಿನ ಕಂಬಿಬೇಲಿಗೆ ಢಿಕ್ಕಿ ಹೊಡೆಯಿತಲ್ಲದೆ ಮಗುಚಿ ಬಿತ್ತು. ಇದರಿಂದ ಡಾ. ಮುಕುಂದ್ರ ಎಡಕಣ್ಣಿಗೆ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿ ಡಾ. ಮುಕುಂದ್ರ ಸ್ನೇಹಿತರಿದ್ದು, ಅವರು ಯಾವುದೇ ಗಾಯವಿಲ್ಲದೆ ಪಾರಾಗಿದ್ದಾರೆ.
Next Story