ಕುಂದಾಪುರ : ಖಾಸಗಿ ಬಸ್ ಗಳ ನಡುವೆ ಅಪಘಾತ; ಏಳು ಮಂದಿಗೆ ಗಾಯ
ಕುಂದಾಪುರ, ಸೆ.20: ಎರಡು ಖಾಸಗಿ ಬಸ್ಸುಗಳ ಮಧ್ಯೆ ಇಂದು ಸಂಜೆ 7:30ರ ಸುಮಾರಿಗೆ ತ್ರಾಸಿ ಬೀಚ್ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಏಳು ಮಂದಿ ಗಾಯಗೊಂಡ ಬಗ್ಗೆ ವರದಿಯಾಗಿದೆ.
ಸಾಗರದಿಂದ ಭಟ್ಕಳದ ಮೂಲಕ ಕುಂದಾಪುರಕ್ಕೆ ಬರುತ್ತಿದ್ದ ಶ್ರೀ ದುರ್ಗಾಂಬಾ ಬಸ್ಸು ಮತ್ತು ಹುಬ್ಬಳ್ಳಿಯತ್ತ ಸಾಗುತ್ತಿದ್ದ ಗಣೇಶ್ ಟ್ರಾವೆಲ್ಸ್ ಸಂಸ್ಥೆಗೆ ಸೇರಿದ ಬಸ್ ಗೆ ಢಿಕ್ಕಿ ಹೊಡೆಯಿತೆನ್ನಲಾಗಿದೆ.
ಇದರಿಂದ ಶ್ರೀ ದುರ್ಗಾಂಬ ಬಸ್ ನಿರ್ವಾಹಕ ಕೋಟೇಶ್ವರದ ವಿಶ್ವನಾಥ ದೇವಾಡಿಗ ಸೇರಿದಂತೆ ಏಳು ಮಂದಿ ತೀವ್ರವಾಗಿ ಗಾಯಗೊಂಡು ಮಣಿಪಾಲ ಹಾಗೂ ಕುಂದಾಪುರ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಢಿಕ್ಕಿಯ ರಭಸಕ್ಕೆ ಎರಡು ಬಸ್ಸುಗಳ ಮುಂಭಾಗ ಸಂಪೂರ್ಣ ನಜ್ಜುಗುಜಾಗಿದೆ.
ಅಪಘಾತದ ಕಾರಣ ಕೆಲ ಕಾಲ ಹೆದ್ದಾರಿ 66ರಲ್ಲಿ ಸಂಚಾರಕ್ಕೆ ತೊಡಕಾಯಿತು. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Next Story