ಯೆಯ್ಯಾಡಿಯಲ್ಲಿ ಇಬ್ಬರ ಜಗಳ: ತಲೆಗೆ ಕಲ್ಲು ಎತ್ತಿಹಾಕಿದ್ದರಿಂದ ಓರ್ವ ಗಂಭೀರ
ಮಂಗಳೂರು, ಸೆ.21: ಕೂಲಿ ಕಾರ್ಮಿಕರಿಬ್ಬರು ಕ್ಷುಲ್ಲಕ ವಿಚಾರಕ್ಕೆ ಜಗಳ ಮಾಡಿಕೊಂಡು, ಓರ್ವನ ತಲೆ ಮೇಲೆ ಇನ್ನೋರ್ವ ಕಲ್ಲನ್ನು ಎತ್ತಿಹಾಕಿದ ಪರಿಣಾಮ ಗಂಭೀರ ಗಾಯಗೊಂಡ ಘಟನೆ ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪದವು ಗ್ರಾಮದ ಯೆಯ್ಯಾಡಿ ಎಂಬಲ್ಲಿ ನಿನ್ನೆ ರಾತ್ರಿ ನಡೆದಿದೆ.
ಡೇನಿಯಲ್ ಫೆರ್ನಾಂಡಿಸ್ ಗಾಯಗೊಂಡವರು. ಜಗದೀಶ್ ಶೆಟ್ಟಿ ಕೃತ್ಯ ಎಸಗಿದ ಆರೋಪಿಯಾಗಿದ್ದಾನೆ.
ಇವರಿಬ್ಬರು ತುಂಬ ಸಮಯದಿಂದ ಪದವು ಗ್ರಾಮದ ಯೆಯ್ಯಾಡಿ ಸುತ್ತಮುತ್ತ ಕೆಲಸಮಾಡಿಕೊಂಡು ರಾತ್ರಿ ರಸ್ತೆ ಬದಿಯಲ್ಲಿಯೇ ಮಲಗಿಕೊಳ್ಳುತ್ತಿದ್ದರು. ನಿನ್ನೆ ರಾತ್ರಿ 9:30ರ ಸುಮಾರಿಗೆ ಅದ್ಯಾವುದೋ ವಿಚಾರಕ್ಕೆ ಸಂಬಂಧಿಸಿ ಇವರೊಳಗೆ ಜಗಳವಾಗಿದೆ. ಈ ವೇಳೆ ಆರೋಪಿ ಜಗದೀಶ್ ಶೆಟ್ಟಿಯುವ ಡೇನಿಯಲ್ ಫೆರ್ನಾಂಡಿಸ್ ತಲೆ ಮೇಲೆ ಕಲ್ಲನ್ನು ಎತ್ತಿ ಹಾಕಿದನೆನ್ನಲಾಗಿದೆ.
ಇದರಿಂದ ಡೇನಿಯಲ್ ಅವರ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಅವರನ್ನು ಕಂಕನಾಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story