ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಖಂಡನೆ ಹಾಗೂ ಸೂಕ್ತ ಕ್ರಮಕ್ಕೆ ಅಗ್ರಹ
ಬಂಟ್ವಾಳ, ಸೆ. 21: ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಸಮೀಪದ ಗೂಡಿನ ಬಳಿಯ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಬಂಧಿತರಾಗಿರುವ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇನ್ನು ಮುಂದೆ ಯಾರು ಕೂಡ ಇಂತಹ ಘೋರ ಅಪರಾಧವನ್ನು ಮಾಡುವುದನ್ನು ತಡೆಯುವಂತಾಗಲು ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಬೇಕು.
ಅಂತೆಯೇ ತೆಲಂಗಾಣ ರಾಜ್ಯದ ನಲ್ಲೊಂಡ ಜಿಲ್ಲೆಯ ಪ್ರಣಯ್ ಎಂಬ ದಲಿತ ಯುವಕ ಮೇಲ್ಜಾತಿ ಹುಡುಗಿಯನ್ನು ಪ್ರೀತಿಸಿ ಮದುವೆಯಾದ ಎಂಬ ಕಾರಣಕ್ಕೆ ಹುಡುಗಿಯ ಹೆತ್ತವರು ಸುಪಾರಿ ನೀಡಿ ದಲಿತ ಯುವಕನನ್ನು ಹತ್ಯೆ ಮಾಡಿಸಿದ್ದು ಅಮಾನವೀಯ ಕೃತ್ಯವಾಗಿದ್ದು, ಈ ಪ್ರಕರಣವನ್ನು ತೀವ್ರವಾಗಿ ಖಂಡಿಸುವುದಾಗಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಪುರಸಭಾ ಸದಸ್ಯ ವಾಸು ಪೂಜಾರಿ ಹೇಳಿದ್ದಾರೆ.
Next Story