ಗೋಳ್ತಮಜಲು: ವಿಶ್ವ ಪೌಷ್ಟಿಕ ಆಹಾರ ಸಪ್ತಾಹ, ವಿವಿಧ ಯೋಜನೆಗಳ ಜಾಗೃತಿ ಅರಿವು ಕಾರ್ಯಕ್ರಮ
ಬಂಟ್ವಾಳ, ಸೆ. 22: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಬಂಟ್ವಾಳ, ಜಿಲ್ಲಾ ಪಂಚಾಯತ್ ಮಂಗಳೂರು ಮತ್ತು ಗೋಳ್ತಮಜಲು ಗ್ರಾಪಂ, ಪ್ರಾಥಮಿಕ ಆರೋಗ್ಯ ಕೇಂದ್ರ ಬಾಳ್ತಿಲ, ಸ್ತ್ರೀ ಶಕ್ತಿ ಗೊಂಚಲು ಅಮ್ಟೂರು ಗೋಳ್ತಮಜಲು ಇದರ ಸಂಯುಕ್ತಾಶ್ರಯದಲ್ಲಿ ಗೋಳ್ತಮಜಲು ವಲಯ ಮಟ್ಟದ ವಿಶ್ವ ಪೌಷ್ಟಿಕ ಆಹಾರ ಸಪ್ತಾಹ, ಪ್ರಧಾನ ಮಂತ್ರಿ ಮಾತ್ರವಂದನಾ ಸಪ್ತಾಹ, ಮಹಿಳಾ ಗ್ರಾಮಸಭೆ, ಬೇಟಿ ಬಚಾವೋ ಬೇಟಿ ಪಡಾವೋ ಜಾಗೃತಿ ಅರಿವು ಕಾರ್ಯಕ್ರಮ ಕಲ್ಲಡ್ಕ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆಯಿತು.
ಗ್ರಾಪಂ ಅಧ್ಯಕ್ಷೆ ಜಯಲಕ್ಮೀ ಕಾರ್ಯಕ್ರಮವನ್ನು ಉದ್ಘಾಟಿಸಿ, ಅದ್ಯಕ್ಷ ತೆಯನ್ನು ವಹಿಸಿದ್ದರು. ಗೋಳ್ತಮಜಲು ಗ್ರಾಪಂ ಉಪಾದ್ಯಕ್ಷ ಮುಹಮ್ಮದ ಮುಸ್ತಫಾ, ನಾರಾಯಣ ಗಟ್ಟಿ, ಜಯಂತ ಗೌಡ, ಗೋಪಾಲ ಪೂಜಾರಿ, ಮುಹಮ್ಮದ್, ಲಖಿತಾ ಆರ್ ಶೆಟ್ಟಿ, ಸುಚಿತ್ರಾ ಗಟ್ಟಿ, ಲಲಿತಾ, ಲತಾ, ರಾಜೇಶ್ ಕೊಟ್ಟಾರಿ, ಅಯಿಶಾ, ಮೇಲ್ವಿಚಾರಕಿ ಶಾಲಿನಿ, ಅಮ್ಡೂರು ಗೊಂಚಲು ಅಧ್ಯಕ್ಷ ವಿದ್ಯಾಶ್ರೀ, ಸಾಂತ್ವನಾ ಕೇಂದ್ರದ ಅಪ್ತ ಸಮಾಲೋಚಕಿ ಗೀತಾ, ಪ್ರಾಥಮಿಕ ಆರೋಗ್ಯ ಕೇಂದ್ರ ದ ವೈದ್ಯಾಧಿಕಾರಿ ವಿಶ್ವೇಶ್ವರ ಭಟ್, ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಮರಿಯ ಕುಟ್ಟಿ, ಶಿಕ್ಷಕಿ ವಾರಿಜ ಶ್ರೀ, ವಿದ್ಯಾಲತಾ, ಗೋಳ್ತಮಜಲು ಪ್ರಾಥಮಿಕ ಆರೋಗ್ಯ ಸಹಾಯಕಿಯರಾದ ರೋಹಿಣಿ, ಜಯಂತಿ ಮತ್ತಿರರು ಉಪಸ್ಥಿತರಿದ್ದರು.
ಮೇಲ್ವಿಚಾರಕಿ ಶಾಲಿನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅರುಣಾ ರಾವ್ ಸ್ವಾಗತಿಸಿ, ಸರ್ವಾಣಿ ರೈ ಕಾರ್ಯಕ್ರಮ ನಿರೂಪಿಸಿದರು. ಬಾಲಪ್ರತಿಭೆ ಕೀರ್ತನಾ ಹಾಗೂ ಸರಕಾರದ ಯೋಜನೆಗಳನ್ನು ಅತಿ ಹೆಚ್ಚು ಫಲಾನುಗಳಿಗೆ ತಲುಪಿಸಲು ಕಾರಣೀಕರ್ತರಾದ ಅಂಗನವಾಡಿ ಕಾರ್ಯಕರ್ತೆ ಬೇಬಿ ಯಮುನಾ ಅವರನ್ನು ಗೌರವಿಸಲಾಯಿತು.