ಬಂಟ್ವಾಳ ಶಾಸಕ ರಾಜೇಶ್ ನಾಯ್ಕರಿಗೆ ಸನ್ಮಾನ
ಬಂಟ್ವಾಳ, ಸೆ.23: ಮೆಲ್ಕಾರ್ ಬಿರ್ವ ಸೆಂಟರ್ ಸಭಾಂಗಣದಲ್ಲಿ ರವಿವಾರ ನಡೆದ ಬಂಟ್ವಾಳ ಸಾರ್ವಜನಿಕ ಉದ್ಯೋಗಸ್ಥರ ಸಹಕಾರ (ನಿ.) ಸಂಘದ ಸುವರ್ಣ ಮಹೋತ್ಸವದ ಸಭಾ ಕಾರ್ಯಕ್ರಮದಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರನ್ನು ಹಿರಿಯ ಸಾಹಿತಿ ಡಾ.ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಸನ್ಮಾನಿಸಿದರು.
ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ, ಮೊಡಂಕಾಪು ಚರ್ಚ್ನ ಪ್ರಧಾನ ಧರ್ಮಗುರು ಅ.ವಂ.ಮ್ಯಾಕ್ಸಿಂ ಎಲ್. ನೊರೊನ್ಹಾ, ರೋಟರಿ ಜಿಲ್ಲಾ ಸಹಾಯಕ ಗವರ್ನರ್ ಪ್ರಕಾಶ ಕಾರಂತ ನರಿಕೊಂಬು, ಜೆಮ್ ವಿದ್ಯಾ ಸಂಸ್ಥೆಗಳ ಮುಖ್ಯಸ್ಥ ಹಾಜಿ ಜಿ.ಮುಹಮ್ಮದ್ ಹನೀಫ್ ಗೋಳ್ತಮಜಲು, ಬಿ.ಸಿ.ರೋಡ್ ಅನ್ನಪೂರ್ಣೇಶ್ವರಿ ದೇವಸ್ಥಾನದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ಕೆ.ರುಕ್ಮಯ ಹೆಗ್ಡೆ, ಕಾರ್ಯದರ್ಶಿ ಕೆ.ಜಯಂತ ನಾಯಕ್, ನಿರ್ದೇಶಕರಾದ ಅನಂತರಾಮ ಹೇರಳ, ಮೀನಾಕ್ಷಿ ವಿ. ರಾವ್, ರವೀಂದ್ರ ಪೂಜಾರಿ, ಪದ್ಮನಾಭ, ಭಾಸ್ಕರ ಯು., ಉಮಾವತಿ ಶೆಟ್ಟಿ, ಶಿವಪ್ಪ ನಾಯ್ಕ್, ಒಲ್ವಿನ್ ಮೋನಿಸ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ರಮೇಶ್ ಸಾಲಿಯಾನ್, ಪ್ರಭಾರ ಶಾಖಾ ವ್ಯವಸ್ಥಾಪಕ ಸದಾಶಿವ ಕೆ. ವೇದಿಕೆಯಲ್ಲಿದ್ದರು.