ಕುಂದಾಪುರ: ದೋಣಿಯಿಂದ ಬಿದ್ದು ಮೀನುಗಾರ ಮೃತ್ಯು
-ಕುಂದಾಪುರ, ಸೆ.23: ಹೊಳೆಯಲ್ಲಿ ಚಿಪ್ಪು ತೆಗೆಯುತ್ತಿದ್ದ ವೇಳೆ ದೋಣಿಯಿಂದ ನೀರಿಗೆ ಬಿದ್ದು ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮೀನುಗಾರನೋರ್ವ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಉಪ್ಪಿನಕುದ್ರು ಗ್ರಾಮದ ಅಂಗಡಿಮನೆ ಉಮೇಶ್ ಶೇರಿಗಾರ್(45) ಮೃತಪಟ್ಟವರು. ಉಪ್ಪಿನಕುದ್ರು ಹೊಳೆಯಲ್ಲಿ ಚಿಪ್ಪು ತೆಗೆಯುವ ಕೆಲಸ ಮಾಡಿಕೊಂಡಿದ್ದ ಇವರು ಸೆ.21ರಂದು ಬೆಳಗ್ಗೆ ಚಿಪ್ಪು ತೆಗೆಯುತಿದ್ದಾಗ ಕಾಲುಜಾರಿ ದೋಣಿಯಿಂದ ಹೊಳೆಗೆ ಬಿದ್ದಿದ್ದರು. ಆಗ ಜೊತೆಯಲ್ಲಿದ್ದವರು ಉಮೇಶ್ರನ್ನು ರಕ್ಷಿಸಿದ್ದರು. ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ಕುಂದಾಪುರ ಆಸ್ಪತ್ರೆಗೆ ದಾಖಲಿಸಲಾಗಿತ್ತು ಬಳಿಕ ಹೆಚ್ಚಿನ ಚಿಕಿತ್ಸೆಗೆ ಉಡುಪಿ ಜಿಲ್ಲಾಸ್ಪತ್ರೆಗೆ ಸೇರಿಸಿದ್ದರೂ, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಕುಂದಾಪುರ ಪೊಲೀಸರು ತಿಳಿಸಿದ್ದಾರೆ.
Next Story