ಮಂಗಳೂರು, ಸೆ.25: ನಗರದ ಉರ್ವಸ್ಟೋರ್ನಲ್ಲಿರುವ ತುಳು ಸಾಹಿತ್ಯ ಅಕಾಡಮಿಯ ಸಂಕೀರ್ಣ ‘ತುಳುಭವನ’ಕ್ಕೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು. ಟಿ. ಖಾದರ್ ಸೆ.26ರ ಬೆಳಗ್ಗೆ 8:30ಕ್ಕೆ ಭೇಟಿ ನೀಡಿ ಅಕಾಡಮಿಯ ವಿವಿಧ ಬೇಡಿಕೆಗಳು ಹಾಗೂ ಕಾರ್ಯಯೋಜನೆಗಳ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.