ಕೊಲ್ಲೂರು, ಸೆ.25: ಗಾರೆ ಕೆಲಸ ಮಾಡಿಕೊಂಡಿದ್ದ ಧಾರವಾಡ ಮೂಲದ ಸಟ್ಟಪ್ಪ(26) ಎಂಬವರು ಕೊಲ್ಲೂರು ಗ್ರಾಮದ ಮಾರಿಕಟ್ಟೆ ಎಂಬಲ್ಲಿರುವ ಬಾಡಿಗೆ ಮನೆಯಿಂದ ಸೆ.23ರಂದು ರಾತ್ರಿ 11 ಗಂಟೆಗೆ ಹೊರಗೆ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.