ಬಂಟ್ವಾಳ: ಬಡಗಕಜೆಕಾರು ವ್ಯಾಪ್ತಿಯ ಫಲಾನುಭವಿಗಳಿಗೆ 94ಸಿ ಹಕ್ಕುಪತ್ರ ವಿತರಣೆ
ಬಂಟ್ವಾಳ, ಸೆ. 27: ಸಂಧ್ಯಾ ಸುರಕ್ಷಾ, ವಿಧವೆ ವೇತನ ಹಾಗೂ ಬಡಗಕಜೆಕಾರು ವ್ಯಾಪ್ತಿಯ ಫಲಾನುಭವಿಗಳಿಗೆ 94ಸಿ ಹಕ್ಕುಪತ್ರಗಳನ್ನು ಇಲ್ಲಿನ ಪಾಂಡವರಕಲ್ಲು ಸಮುದಾಯ ಭವನದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ವಿತರಣೆ ಮಾಡಿದರು.
ಜಿಲ್ಲಾ ಪಂಚಾಯತ್ ಸದಸ್ಯ ಪದ್ಮಶೇಖರ್ ಜೈನ್, ತಾಪಂ ಸದಸ್ಯ ಬೇಬಿ ಕೃಷ್ಣಪ್ಪ, ಹರಿಶ್ಚಂದ್ರ ಪೂಜಾರಿ ಕಜೆಕಾರು, ಬಡಗಕಜೆಕಾರು ಗ್ರಾಪಂ ಅಧ್ಯಕ್ಷ ವಕ್ರ ಪೂಜಾರಿ ಬಾರ್ದೋಟ್ಟು, ಬಡಗಕಜೆಕಾರು ಗ್ರಾಮಕರೀಣಿಕ ನಿಶ್ಮಿತಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಾಲಕೃಷ್ಣ ಪೂಜಾರಿ ಮತ್ತು ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.
ಬಂಟ್ವಾಳ ಕಂದಾಯ ನಿರೀಕ್ಷ ನವೀನ್ ಸ್ವಾಗತಿಸಿ, ಪ್ರಕಾಶ್ ಕರ್ಲ ವಂದಿಸಿ, ವಾಸು ದೇವಾಡಿಗ ನಿರೂಪಿಸಿದರು.
Next Story