ಮಂಗಳೂರು: ಅಂಗಾಂಗ ದಾನ, ಏಡ್ಸ್ ಮಾಹಿತಿ ಶಿಬಿರ
ಮಂಗಳೂರು, ಸೆ. 28: ಶ್ರಿ ಶಾರದಾ ಮಹಿಳಾ ಮಂಡಲ, ಶಾರದಾನಿಕೇತನ ಚಿಲಿಂಬಿ ಮಂಗಳೂರು ಹಾಗೂ ಪ್ರಜ್ಞಾ ಸಲಹಾ ಕೇಂದ್ರ ಇವರ ಜಂಟಿ ಆಶ್ರಯದಲ್ಲಿ ಏಡ್ಸ್ ಮಾಹಿತಿ ಶಿಬಿರ ಹಾಗೂ ವೆನ್ಲಾಕ್ ವೈದ್ಯಕೀಯ ಶಿಕ್ಷಣ ವಿಭಾಗದ ವತಿಯಿಂದ ದೇಹದ ಅಂಗಾಂಗ ದಾನದ ಬಗ್ಗೆ ಮಾಹಿತಿ ಶಿಬಿರ ನಡೆಯಿತು.
ಶಿಬಿರದ ಉದ್ಘಾಟನೆಯನ್ನು ಪ್ರಜ್ಞಾ ಸಲಹಾ ಕೇಂದ್ರದ ಕಾರ್ಯಕರ್ತೆ ಭಾರತಿ ಸುವರ್ಣ ಉದ್ಘಾಟಿಸಿದರು. ಶಿಬಿರದಲ್ಲಿ ಹಲವಾರು ಸದಸ್ಯರು ಭಾಗವಹಿಸಿದ್ದರು.
ಈ ಸಂದರ್ಭ ಪ್ರಜ್ಞಾ ಸಲಹಾ ಕೇಂದ್ರದ ಕಾರ್ಯಕರ್ತೆ ದೇವಿಕ ನಾಗೇಶ್, ವೆನ್ಲಾಕ್ ವೈದ್ಯಕೀಯ ಶಿಕ್ಷಣ ವಿಭಾಗದ ಕಾರ್ಯಕರ್ತೆ ಪದ್ಮಾ, ಸಂಘದ ಅದ್ಯಕ್ಷೆ ಹರಿಣಿ ವಿಜೇಂದ್ರ, ಗೌರವಾಧ್ಯಕ್ಷೆ ಪೂರ್ಣಿಮ ವಿ.ಕದ್ರಿ ಹಾಗೂ ಸಂಘದ ಸದಸ್ಯೆಯರು ಉಪಸ್ಥಿತರಿದ್ದರು.
Next Story