'ಕೆನರಾ ಚೇಂಬರ್' ಅಧ್ಯಕ್ಷರಾಗಿ ಅಬ್ದುಲ್ ಹಮೀದ್ ಅವಿರೋಧ ಆಯ್ಕೆ
ಮಂಗಳೂರು, ಸೆ. 28: ಕೆನರಾ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ (ಕೆಸಿಸಿಐ) ಅಧ್ಯಕ್ಷರಾಗಿ ಹಿರಿಯ ಉದ್ಯಮಿ ಪಿ.ಬಿ. ಅಬ್ದುಲ್ ಹಮೀದ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗುರುವಾರ ನಡೆದ ಚೇಂಬರ್ಸ್ ಮಹಾಸಭೆಯಲ್ಲಿ ಈ ಆಯ್ಕೆ ನಡೆದಿದೆ.
ಉಪಾಧ್ಯಕ್ಷರಾಗಿ ಇಸಾಕ್ ವಾಸ್, ಕೋಶಾಧಿಕಾರಿಯಾಗಿ ಎಂ. ಗಣೇಶ್ ಕಾಮತ್, ಕಾರ್ಯದರ್ಶಿಯಾಗಿ ಶಶಿಧರ ಪೈ ಮಾರೂರು ಮತ್ತು ಪ್ರಶಾಂತ್ ಸಿ.ಜಿ., ನಿರ್ದೇಶಕರಾಗಿ ನಿಟ್ಟೆ ಯತಿರಾಜ್ ಶೆಟ್ಟಿ, ಬಿ.ಎ. ನಝೀರ್, ನಿಸಾರ್ ಫಕೀರ್ ಮುಹಮ್ಮದ್, ಅನಂತೇಶ್ ವಿ.ಪ್ರಭು, ಅನಂತ್ ಜಿ. ಪೈ, ಅಮಿತ್ ರಾಮಚಂದ್ರ, ಪ್ರವೀಣ್ ಕುಮಾರ್ ಬಂಗೇರ, ಕೆ. ದಿನೇಶ ರಾವ್, ಆದಿತ್ಯ ಪದ್ಮನಾಭ ಪೈ, ಪಳ್ಳಿ ಸದಾನಂದ ಶೆಟ್ಟಿ, ದಿವಾಕರ ಪೈ ಕೊಚ್ಚಿಕಾರ್, ಅಬ್ದುಲ್ ರಹ್ಮಾನ್ ಮುಸ್ಬಾ ಆಯ್ಕೆಯಾಗಿದ್ದಾರೆ.
Next Story