ಕೆಎಸ್ಐಯಿಂದ ಸೆ.30ರಂದು ‘ಕ್ಯುಎಚ್ಎಲ್ಎಸ್ ಕಾನ್ಫರೆನ್ಸ್’
ಮಂಗಳೂರು, ಸೆ.29: ಕರ್ನಾಟಕ ಸಲಫಿ ಅಸೋಸಿಯೇಶನ್(ಕೆಎಸ್ಎ), ಮಂಗಳೂರು ಇದರ ವತಿಯಿಂದ ‘ಕ್ಯುಎಚ್ಎಲ್ಎಸ್ ಕಾನ್ಫರೆನ್ಸ್’ ಸೆ.30ರಂದು ಹಂಪನಕಟ್ಟೆಯ ಮಸ್ಜಿದುನ್ನೂರು ಬಳಿಯಿರುವ ಐಎಂಎ ಹಾಲ್ನಲ್ಲಿ ಹಮ್ಮಿಕೊಳ್ಳಲಾಗಿದೆ.
ಅಂದು ಸಂಜೆ 4:30ರಿಂದ ರಾತ್ರಿ 9:30ರವರೆಗೆ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಎಸ್ಎ ಅಧ್ಯಕ್ಷ ಅಬ್ದುರ್ರಶೀದ್ ಇಂಜಿನಿಯರ್ ವಹಿಸುವರು. ಮುಖ್ಯ ಅತಿಥಿಯಾಗಿ ಯುನಿಟಿ ಹೆಲ್ತ್ ಕಾಂಪ್ಲೆಕ್ಸ್ನ ಅಧ್ಯಕ್ಷ ಡಾ.ಸಿ.ಪಿ.ಹಬೀಬ್ ರಹ್ಮಾನ್ ಭಾಗವಹಿಸುವರು.
ಶೈಖ್ ಅಬ್ದುಲ್ ಖಾದಿರ್ ಉಮ್ರಿ, ಫೈಸಲ್ ವೌಲವಿ, ಇಜಾಝ್ ಸ್ವಲಾಹಿ, ಅಬೂಬಕರ್ ನಝೀರ್ ಸಲಫಿ ಅತಿಥಿಗಳಾಗಿರುವರು ಎಂದು ಪ್ರಕಟನೆ ತಿಳಿಸಿದೆ.
Next Story