ಬಂಟ್ವಾಳ: ಹಲ್ಲೆ, ಕೊಲೆಯತ್ನ ಪ್ರಕರಣ; ಆರೋಪಿ ಸೆರೆ
ಬಂಟ್ವಾಳ, ಸೆ. 29: ಕೊಳ್ನಾಡು ಗ್ರಾಮದ ನಾರ್ಶ ಎಂಬಲ್ಲಿ ಕಾರ್ಮಿಕನ ಮೇಲೆ ದುಷ್ಕರ್ಮಿಗಳ ತಂಡ ಹಲ್ಲೆ ನಡೆಸಿ, ಸೀಮೆಎಣ್ಣೆ ಸುರಿದು ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೋರ್ವನನ್ನು ವಿಟ್ಲ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಸ್ಥಳೀಯ ನಿವಾಸಿ ಇಬ್ರಾಹಿ ಕರೀಂ ಬಂಧಿತ ಆರೋಪಿ.
ತಲೆಮರೆಸಿ ಕೊಂಡಿದ್ದ ಪ್ರಕರಣದ ಪ್ರಮುಖ ಆರೋಪಿ ಇಬ್ರಾಹಿ ಕರೀಂ ನನ್ನು ವಿಟ್ಲ ನಾಡಕಚೇರಿ ಹಿಂಭಾಗದಲ್ಲಿ ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ ಅ.12ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಹಿನ್ನಲೆ: ಸೆ. 20ರಂದು ರಾತ್ರಿ ವಿಟ್ಲ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮ ನಾರ್ಶ ಉದ್ಯಮಿ ಸಿಂಗಾರಿ ಬೀಡಿ ಮಾಲಕ ಸುಲೈಮಾನ್ ಹಾಜಿಯವರ ತೋಟದ ಮನೆಯಲ್ಲಿದ್ದ ಕಾರ್ಮಿಕ ಭೀಮೇಶ್ ಎಂಬಾತನ ಮೇಲೆ ತಂಡವೊಂದು ಹಲ್ಲೆ ಮಾಡಿದೆ ಎಂಬ ಆರೋಪದ ಮೇರೆಗೆ ಗಾಯಾಳು ದೂರಿನ್ವಯ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
Next Story