ಕಡಬ: ಜ್ವರ, ಹಳದಿ ಕಾಯಿಲೆಗೆ ವಿದ್ಯಾರ್ಥಿನಿ ಬಲಿ
ಕಡಬ, ಸೆ.30. ಜ್ವರ ಹಾಗೂ ಹಳದಿ ಕಾಯಿಲೆಗೆ ತುತ್ತಾಗಿ ಪ್ರಥಮ ಪಿಯು ವಿದ್ಯಾರ್ಥಿನಿಯೋರ್ವಳು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ರವಿವಾರ ನಡೆದಿದೆ.
ಮೃತ ವಿದ್ಯಾರ್ಥಿನಿಯನ್ನು ಕೊಂಬಾರು ಶಾಲಾ ಮುಖ್ಯೋಪಾಧ್ಯಾಯರಾದ ಕೊಂಬಾರು ಹೊಸಬೀಡು ನಿವಾಸಿ ಚಿದಾನಂದ ಗೌಡ ಎಂಬವರ ಪುತ್ರಿ ಹರ್ಷಾ ಕೆ.ಸಿ. (17) ಎಂದು ಗುರುತಿಸಲಾಗಿದೆ.
2017 ರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 609 ಅಂಕಗಳನ್ನು ಪಡೆಯುವ ಮೂಲಕ ಕಡಬದ ಕ್ನಾನಾಯ ಜ್ಯೋತಿ ವಿದ್ಯಾಸಂಸ್ಥೆಯ ಟಾಪರ್ ಆಗಿದ್ದ ಈಕೆ, ಬಳಿಕ ಮಂಗಳೂರಿನ ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿಪಿಯುವ್ಯಾಸಂಗ ಮಾಡುತ್ತಿದ್ದರು. ಕಳೆದ ಕೆಲವು ದಿನಗಳ ಹಿಂದೆ ಜ್ವರ ಹಾಗೂ ಹಳದಿ ಖಾಯಿಲೆಗೆ ತುತ್ತಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
Next Story