ಮಣಿಪಾಲ: ಡಿವೈಡರ್ಗೆ ಕಾರು ಢಿಕ್ಕಿ: ವಿದ್ಯಾರ್ಥಿ ಮೃತ್ಯು
ಮಣಿಪಾಲ, ಸೆ. 30: ಮಣಿಪಾಲದ ಹಾಟ್ ಸ್ಪೈಸ್ ಹೊಟೇಲ್ ಬಳಿ ಶನಿವಾರ ಮಧ್ಯರಾತ್ರಿ ಕಾರೊಂದು ರಸ್ತೆಯ ಡಿವೈಡರ್ಗೆ ಢಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿಯೋರ್ವ ಮೃತಪಟ್ಟು, ಮೂವರು ತೀವ್ರವಾಗಿ ಗಾಯಗೊಂಡ ಬಗ್ಗೆ ವರದಿಯಾಗಿದೆ.
ಮೃತರನ್ನು ಕಾರು ಚಲಾಯಿಸುತ್ತಿದ್ದ ದೇರಳಕಟ್ಟೆ ನಿಟ್ಟೆ ಇನ್ಸಿಟ್ಯೂಟ್ನ ವಿದ್ಯಾರ್ಥಿ, ಕೇರಳ ಕಣ್ಣೂರಿನ ಐವನ್ ಅನಿಲ್ ಕುಮಾರ್(20) ಎಂದು ಗುರು ತಿಸಲಾಗಿದೆ.
ಕಾರಿನಲ್ಲಿದ್ದ ಮೃತರ ಸ್ನೇಹಿತರಾದ ಮಣಿಪಾಲದ ವಿದ್ಯಾರ್ಥಿ ವರುಣ್ ವಿಜಿತ್ ಮತ್ತು ದೇರಳಕಟ್ಟೆಯ ವಿದ್ಯಾರ್ಥಿಗಳಾದ ಐರಿನ್, ದೀಪಿಕಾ ಎಂಬವರು ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಇವರೆಲ್ಲ ರಾತ್ರಿ ಹೊಟೇಲ್ನಲ್ಲಿ ಊಟ ಮುಗಿಸಿ ಮಣಿಪಾಲದ ಮಾಂಡವಿ ಪ್ಯಾರಡೈಸ್ನಲ್ಲಿರುವ ವರುಣ್ ವಿಜಿತ್ರ ರೂಮಿಗೆ ಕಾರಿನಲ್ಲಿ ಹೋಗುತ್ತಿದ್ದಾಗ ಕಾರು ನಿಯಂತ್ರಣ ತಪ್ಪಿ ರಸ್ತೆಯ ಡಿವೈಡರ್ಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಕಾರು ಪಲ್ಟಿಯಾಗಿ ಕಾರು ಚಲಾಯಿಸುತ್ತಿದ್ದ ಐವನ್ ರಸ್ತೆಗೆ ಎಸೆಯ ಲ್ಪಟ್ಟರು. ಈ ವೇಳೆ ಕಾರು ಮೈಮೇಲೆ ಬಿದ್ದ ಪರಿಣಾಮ ಐವನ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರೆಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.