ಕರ್ಣಾಟಕ ಬ್ಯಾಂಕ್ನಿಂದ ಸಾಲ ಮರುಪಾವತಿ ನಿರ್ವಹಣೆಗೆ ವಿಶೇಷ ಕಾರ್ಯಯೋಜನೆ
ಮಂಗಳೂರು, ಸೆ.30: ಕರ್ಣಾಟಕ ಬ್ಯಾಂಕ್ ವತಿಯಿಂದ ‘ಕೆಬಿಎಲ್ ವಿಕಾಸ ’ ಯೋಜನೆಯ ಪ್ರಕಾರ ಪಾವತಿಯಾಗದೆ ಬಾಕಿ ಉಳಿದಿರುವ ಗ್ರಾಹಕರಿಂದ ಸಾಲ ವಸೂಲಾತಿ ಮಾಡುವ ನಿಟ್ಟಿನಲ್ಲಿ ಕಾರ್ಯಯೋಜನೆಯನ್ನು ರೂಪಿಸಿದೆ .ಈ ಯೋಜನೆಯ ಪ್ರಕಾರ ಪ್ರಾದೇಶಿಕ ಸಾಲ ಸಂಗ್ರಹಗಳ ಕೇಂದ್ರಗಳನ್ನು ದೇಶಾದ್ಯಂತ ಆರಂಭಿಸಲು ನಿರ್ಧರಿಸಿದೆ.
ಈ ಕೇಂದ್ರಗಳು ಸ್ಥಳೀಯ ರಿಟೈಲ್ ಸಾಲ ಸಂಗ್ರಹ ತಂಡಗಳು , ಪ್ರಾದೇಶಿಕ ನಗರ ಪ್ರದೇಶದ ಸಂಗ್ರಹ ವಿಭಾಗ ಮತ್ತು ಸಾಲ ನಿರ್ವಹಣಾ ತಂಡಗಳ ಸಂಪರ್ಕ ಕೇಂದ್ರಗಳನ್ನು ಹೊಂದಿದ್ದು ,ಗ್ರಾಕರು ನಿಯಮಿತವಾಗಿ ಸಾಲ ಕಂತನ್ನು ಮರು ಪಾವತಿ ಮಾಡಲು ಮತ್ತು ಅವರಿಂದ ಸಾಲದ ಮೊತ್ತವನ್ನು ಸಂಗ್ರಹಿಸಿ ಬ್ಯಾಂಕಿಗೆ ತಲುಪಿಸಲು ಸಹಕಾರಿಯಾಗಲಿದೆ. ಇದರೊಂದಿಗೆ ಬ್ಯಾಂಕ್ನಲ್ಲಿ ಆರೋಗ್ಯಕರ ರೀತಿಯಲ್ಲಿ ಸಾಲದ ನಿರ್ವಹಣೆ ಮಾಡುವ ವ್ಯವಸ್ಥೆ ಮುಂದೆ ಬರಲಿದೆ.
ಇತ್ತೀಚೆಗೆ ಬೆಂಗಳೂರು ಪ್ರಾದೇಶಿಕ ಕಚೇರಿಯಲ್ಲಿ ಈ ರೀತಿಯ ಕೇಂದ್ರವನ್ನು ಸಾಲ ಮೇಲ್ವಿಚಾರಣಾ ವಿಭಾಗದ ಮಹಾ ಪ್ರಬಂಧಕರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪ್ರಾದೇಶಿಕ ಕಚೇರಿ ,ಕೇಂದ್ರ ಕಚೇರಿಯ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥತರಿದ್ದರು ಎಂದು ಬ್ಯಾಂಕ್ನ ಪ್ರಕಟಣೆ ತಿಳಿಸಿದೆ.