ಅ.3ರಿಂದ ಶಿರಾಡಿ ಘಾಟ್ ಮೂಲಕ ಬಸ್ ಸಂಚಾರಕ್ಕೆಅವಕಾಶ: ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್
ಮಂಗಳೂರು, ಅ. 1: ಬುಧವಾರದಿಂದ ಶಿರಾಡಿ ಘಾಟ್ ಮೂಲಕ ಎಲ್ಲಾ ಬಸ್ ಸಂಚಾರಕ್ಕೆ ಅವಕಾಶ ನೀಡಲಾಗುವುದು ಎಂದು ದ.ಕ. ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಶಿರಾಡಿ ಘಾಟ್ ನಲ್ಲಿ ಕುಸಿತಗೊಂಡ 12 ಕಡೆಯ ಪೈಕಿ 8 ಕಡೆ ಅಪಾಯವಿಲ್ಲ. ಅಪಾಯ ಸಾಧ್ಯತೆಯ 4 ಕಡೆ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಹಾಸನ ಜಿಲ್ಲಾಧಿಕಾರಿ ಮತ್ತು ದ.ಕ. ಎಸ್ಪಿ ಜೊತೆ ಚರ್ಚಿಸಲಾಗಿದೆ. ಒಂದೆರಡು ವಾರದ ಬಳಿಕ ಪರಿಸ್ಥಿತಿ ಗಮನಿಸಿ ಘನ ವಾಹನಗಳ ಸಂಚಾರದ ಬಗ್ಗೆ ತೀರ್ಮಾನಿಸಲಾಗುವುದು ಎಂದು ಈ ವೇಳೆ ಮಾಹಿತಿ ನೀಡಿದರು.
Next Story