ಅ.3ರಂದು ತಾಲೂಕು ವಕ್ಫ್ ಸಮಾವೇಶ: ಸಚಿವ ಝಮೀರ್ ಅಹ್ಮದ್ ಸುಳ್ಯಕ್ಕೆ
ಸುಳ್ಯ, ಅ. 1: ತಾಲೂಕು ಮಸೀದಿ ಮದರಸ ಮುಸ್ಲಿಂ ಶಿಕ್ಷಣ ಸಂಸ್ಥೆ ಹಾಗೂ ಸ್ಥಾಪನೆಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಇಮಾಮರುಗಳ ಮತ್ತು ಮುಖ್ಯಸ್ಥರುಗಳ ವಕ್ಫ್ ಪ್ರತಿನಿಧಿ ಸಮಾವೇಶ ಅ. 3 ಮಧ್ಯಾಹ್ನ 2 ಗಂಟೆಗೆ ಸುಳ್ಯದ ಅನ್ಸಾರಿಯಾ ಯತೀಂಖಾನ ವಠಾರದಲ್ಲಿ ನಡೆಯಲಿದೆ.
ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರೀಕ ಸರಬರಾಜು ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ವಕ್ಫ್ ಸಚಿವ ಝಮೀರ್ ಅಹ್ಮದ್ ಖಾನ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಜಿಲ್ಲಾ ವಕ್ಫ್ ಸಚಿವ ಕಣಚೂರ್ ಮೋನು ಹಾಜಿ ಮೊದಲಾದವರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ಈ ಸಮಾವೇಶದಲ್ಲಿ ತಾಲೂಕಿನ ಎಲ್ಲಾ ಮಸೀದಿಗಳ ಪ್ರತಿನಿಧಿಗಳು ಭಾಗವಹಿಸಬೇಕೆಂದು ದ.ಕ. ಜಿಲ್ಲಾ ವಕ್ಫ್ ಸಮಿತಿ ಸದಸ್ಯ ಕೆ.ಎಂ. ಮುಸ್ತಫಾ ತಿಳಿಸಿದ್ದಾರೆ.
Next Story