ಆಂಜೆಲೊರ್ ಗಾರ್ಡಿಯನ್ ಏಂಜೆಲ್ ಚರ್ಚ್ನ ವಾರ್ಷಿಕ ಮಹೋತ್ಸವ
ಮಂಗಳೂರು, ಅ. 2: ನಾಗುರಿಯ ಆಂಜೆಲೊರ್ ಗಾರ್ಡಿಯನ್ ಏಂಜೆಲ್ ಚರ್ಚ್ನ ವಾರ್ಷಿಕ ಮಹೋತ್ಸವ ಇಂದು ನಡೆಯಿತು.
ಬಲಿಪೂಜೆ ಮೊದಲು ಚರ್ಚ್ ಧರ್ಮಗುರುಗಳಾದ ವಂ. ವಿಲಿಯಂ ಮಿನೆಜಸ್ರವರು ವಾರ್ಷಿಕ ಮಹೋತ್ಸವಕ್ಕೆ ಆರ್ಥಿಕ ಸಹಾಯ ನೀಡಿದ ಎಲ್ಲ ಭಕ್ತರಿಗೆ ಗೌರವದ ಮೊಂಬತ್ತಿ ನೀಡಿ ಹರಸಿದರು.
ಮಂಗಳೂರು ಧರ್ಮಪ್ರಾಂತ್ಯದ ವಿಶ್ರಾಂತ ಧರ್ಮಾಧ್ಯಕ್ಷರು ಅ. ವಂ. ಡಾ. ಅಲೋಶಿಯಸ್ ಡಿಸೋಜ ಇವರು ಸಂಭ್ರಮದ ಬಲಿಪೂಜೆ ಅರ್ಪಿಸಿದರು. ಹಾಗೂ ಪುತ್ತೂರು ಫಿಲೋಮಿನ ಕಾಲೇಜಿನ ಪ್ರಾದ್ಯಾಪಕರಾದ ವಂ ಡಾ ಆಂಟನಿ ಪ್ರಕಾಶ್ ಮೊಂತೇರೊ ರವರು ಪ್ರವಚನ ನೀಡಿದರು.
ಮಂಗಳೂರು ನಗರದ ಮತ್ತು ಆಸುಪಾಸಿನ ಸುಮಾರು 25 ಧರ್ಮಗುರುಗು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. ವಂ. ವಿಲಿಯಂ ಮಿನೆಜಸ್ ವಂದಿಸಿದರು.
Next Story