ಗಾಂಧಿಯನ್ನು ಅನುಭವಿಸಬೇಕೆ ಹೊರತು ವಿವರಿಸಲು ಆಗಲ್ಲ: ಡಾ.ನಂದಕಿಶೋರ್
ಉಡುಪಿ, ಅ.1: ಗಾಂಧೀಜಿ ಅಸಮಾನತೆಯ ನಿವಾರಣೆಗಾಗಿ ನಡೆಸಿದ ಹೋರಾಟದಿಂದ ಮಹಾತ್ಮರಾದರು. ಚಾಣಾಕ್ಷತನದಿಂದಧರ್ಮವನ್ನು ಸಾಧನವ ನ್ನಾಗಿ ಬಳಸಿಕೊಂಡ ವಿಶಿಷ್ಟ ರಾಜಕಾರಣಿ ಅವರಾಗಿದ್ದರು. ಬಹುಸಂಖ್ಯಾತರನ್ನು ಸೇರಿಸಿಕೊಂಡು ಅಲ್ಪಸಂಖ್ಯಾತರನ್ನು ಜೊತೆಯಲ್ಲಿ ಕರೆದುಕೊಂಡು ಹೋಗು ತ್ತಿದ್ದರು ಎಂದು ಮಣಿಪಾಲ ಮಾಹೆಯ ಜಿಯೋಪೋಲಿಟಿಕ್ಸ್ ವಿಭಾಗದ ಪ್ರಾಧ್ಯಾಪಕ ಡಾ.ನಂದಕಿಶೋರ್ ಹೇಳಿದ್ದಾರೆ.
ಉಡುಪಿ ಎಂಜಿಎಂ ಕಾಲೇಜಿನ ಗಾಂಧಿ ಅಧ್ಯಯನ ಕೇಂದ್ರ ಹಾಗೂ ಎಂಜಿಎಂ ಪದವಿ ಪೂರ್ವ ಕಾಲೇಜಿನ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ಮಂಗಳವಾರ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾದ ‘ಗಾಂಧಿ-150’ ಕಾರ್ಯಕ್ರಮದಲ್ಲಿ ಅವರು ವುುಖ್ಯ ಅತಿಥಿ ಯಾಗಿ ಮಾತನಾಡುತಿದ್ದರು.
ಗಾಂಧಿ ಕೇವಲ ಒಂದು ಕ್ಷೇತ್ರಕ್ಕೆ ಸೀಮಿತವಾದ ವ್ಯಕ್ತಿ ಅಲ್ಲ. ಅತ್ತ ರಾಜ ಕಾರಣಿಯೂ ಅಲ್ಲದ ಇತ್ತ ಮುತ್ಸದಿ ಅಲ್ಲದ ವಿಭಿನ್ನ ವ್ಯಕ್ತಿತ್ವ ಹೊಂದಿದ್ದ ಗಾಂಧಿ ಅರ್ಥವಾಗದ ಮನುಷ್ಯರಾಗಿದ್ದರು. ಗಾಂಧಿಯನ್ನು ವಿವರಿಸಲು ಆಗಲ್ಲ, ಅವರನ್ನು ಅನುಭವಿಸಬೇಕು. ವಿಭಿನ್ನ ಹಾದಿ ತುಳಿದ ಗಾಂಧಿ ಬದುಕು ಪ್ರಯೋಗಕ್ಕೆ ಒಡ್ಡಿಕೊಂಡು ಹೋಗಿದೆ. ಅಪ್ರಿಯ ಸತ್ಯ ಹೇಳುವುದರಲ್ಲಿ ಗಾಂಧಿ ನಿಸ್ಸೀಮರಾಗಿದ್ದರು ಎಂದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಜಿ.ವಿಜಯ ವಹಿಸಿ ದ್ದರು. ಈ ಸಂದರ್ಭದಲ್ಲಿ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸ ಲಾಯಿತು. ಎಂಜಿಎಂ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಮಾಲತಿ ದೇವಿ ಉಪಸ್ಥಿತರಿದ್ದರು.
ಗಾಂಧಿ ಅಧ್ಯಯನ ಕೇಂದ್ರದ ಸಂಯೋಜಕ ವಿನೀತ್ ರಾವ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಸುಚಿತ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮೊದಲು ಕಾಲೇಜಿನ ವಿದ್ಯಾರ್ಥಿ ಗಳಿಂದ ಸರ್ವಧರ್ಮ ಸಮಭಾವದ ಪ್ರಾರ್ಥನೆ ‘ರಾಮ್ಧುನ್ ಭಜನ್’ ನಡೆಯಿತು.