ಉಡುಪಿ: ರಾಜ್ಯ ವಕ್ಫ್ ಆಡಳಿತಾಧಿಕಾರಿ ಇಬ್ರಾಹಿಂ ಅಡೂರ್ ಭೇಟಿ
ಉಡುಪಿ, ಅ.2: ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಕಚೇರಿಗೆ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಆಡಳಿತಾಧಿಕಾರಿ ಇಬ್ರಾಹಿಂ ಅಡೂರ್ ಅ.1ರಂದು ಭೇಟಿ ನೀಡಿ ಸಮಾಲೋಚನೆ ನಡೆಸಿದರು.
ವಕ್ಫ್ ಅಧಿಕಾರಿಗಳಿಂದ ಸಂಸ್ಥೆಗಳ ಪ್ರಗತಿ ಕುರಿತು ಮಾಹಿತಿ ಪಡೆದು ಕೊಂಡ ಅವರು, ಮುಸ್ಲಿಮ್ ದಫನ ಭೂಮಿ, ಆಡಳಿತ ಸಮಿತಿಗಳು, ಸಂಸ್ಥೆಗಳಿಗೆ ಮಂಜೂರಾಗಿರುವ ಅನುದಾನ ಬಿಡುಗಡೆ ಮತ್ತು ಬಾಕಿ ಇರುವ ಪ್ರಸ್ತಾವನೆ ಗಳನ್ನು ಪರಿಶೀಲಿಸಿದರು. ವಕ್ಫ್ ಆಸ್ತಿಗಳ ಖಾತಾ ಬದಲಾವಣೆ ಕುರಿತು ಸಂಕ್ಷಿಪ್ತ ವಾಗಿ ಪರಿಶೀಲಿಸಿ ಸೂಕ್ತ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ವಕ್ಫ್ ಸಲಹಾ ಮಂಡಳಿ ಅಧ್ಯಕ್ಷ ಹಾಜಿ ಕೆ.ಪಿ. ಇಬ್ರಾಹಿಂ, ಸದಸ್ಯರುಗಳಾದ ಅಬೂಬಕ್ಕರ್, ಸಂಶುದ್ದೀನ್, ಅಬ್ದುಲ್ ಮುನಾಫ್, ಟಿ.ಹುಸೈನ್, ಮುಹಮ್ಮದ್ ಗೌಸ್, ಮುಹಮ್ಮದ್ ಅಲಿ, ತಾಜು ದ್ದೀನ್ ಇಬ್ರಾಹಿಂ, ಶಾಬಾನ್, ಅಬ್ದುಲ್ ಕಾದರ್, ಅಬ್ದುಲ್ ರೆಹಮಾನ್, ವಕ್ಫ್ ಅಧಿಕಾರಿಗಳಾದ ನಾಝಿಯಾ, ಮುಜಾಹಿದ್ ಪಾಶಾ ಮೊದಲಾದವರು ಉಪಸ್ಥಿತರಿದ್ದರು.
Next Story